Thursday, May 9, 2024

ಪವರ್ ಟಿವಿ ಬಿಗ್‌ ಇಂಪ್ಯಾಕ್ಟ್ : ಬೋರ್‌ವೆಲ್‌ ದುರಸ್ತಿ ಮಾಡಿ ಜನರಿಗೆ ನೀರು ಪೂರೈಕೆ

ರಾಯಚೂರು: ರಾಜ್ಯದಲ್ಲಿ ಎಲ್ಲೆಲ್ಲೂ ಬರ ತಾಂಡವಾಡುತ್ತಿದೆ. ಬಿಸಿಲ ನಾಡು ರಾಯಚೂರು ಸಹ ಇದರಿಂದ ಹೊರತಾಗಿಲ್ಲ.

ಕಳೆದ 12 ದಿನಗಳಿಂದ ಕುಡಿಯಲು ನೀರಿಗಾಗಿ ರಾಯಚೂರಿನ ಮುರ್ಕಿದೊಡ್ಡಿ ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುತ್ತಿದ್ದಾರೆ.

400 ಕುಟುಂಬಗಳಿರುವ ಇರುವ ಈ ಗ್ರಾಮದಲ್ಲಿ ಚಳಿಗಾಲದಲ್ಲೇ ನೀರಿನ ಸಮಸ್ಯೆ ಶುರುವಾಗಿದ್ದು, ಅಕ್ಷರಶಃ ನೀರಿಗಾಗಿ ತತ್ವಾರ ಇತ್ತು.

ಒಂದು ಬಿಂದಿಗೆ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆಯುವ ಪರಿಸ್ಥಿತಿ ಇದೆ. ಪ್ರತಿನಿತ್ಯ 6 ಟ್ಯಾಂಕರ್ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಹೇಳಿದ್ದರು. ಆದರೆ, ವಾಸ್ತವವಾಗಿ 4 ಟ್ಯಾಂಕ್ ನೀರು ಕೊಡುತ್ತಿದ್ದರು. ಅದು ಯಾರಿಗೆ ಸಾಲುತ್ತೆ? ಇರುವ ಒಂದು ಬೋರ್ ವೆಲ್ ಕೆಟ್ಟು12 ದಿನಗಳಾಗಿವೆ ಎಂದು ಗ್ರಾಮಸ್ಥರು ಅಳಲುತೊಡಿದ್ದರು.

ಗ್ರಾಮಸ್ಥರು ಫೋನ್ ಮಾಡಿದ್ರೆ ನಿಮಗ್ಯಾಕೆ ಬೇಕು ನೀರು ಅಂತಾರೆ. ಯಾರಿಗೆ ಹೇಳುತ್ತೀರಿ ಹೇಳಿಕೊಳ್ಳಿ ಎಂದು ದರ್ಪ ಮೆರೆಯುತ್ತಿದ್ದರು. ಈ ಕುರಿತು ‘ದಾಹ.. ದಾಹ.. ದಾಹ’ ಶೀರ್ಷಿಕೆಯಡಿ ಪವರ ಟಿವಿ ವರದಿ ಪ್ರಸಾರ ಮಾಡಿತ್ತು.

ಪವರ್ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಅರ್ಧಗಂಟೆಯಲ್ಲೇ ಬೋರ್‌ವೆಲ್‌ ದುರಸ್ತಿ ಮಾಡಿ ನೀರು ಪೂರೈಕೆ ಮಾಡಿದ್ದಾರೆ. ಪವರ್ ಟಿವಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

 

 

RELATED ARTICLES

Related Articles

TRENDING ARTICLES