ಬಳ್ಳಾರಿ : ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಆಯೋಜನೆ ಮಾಡಿದ್ದ ನಾರಿ ಶಕ್ತಿ ಕಾರ್ಯಕ್ರಮಕ್ಕೆ
ಗೀತಾ ಶಿವಕುಮಾರ್ ವಿದ್ಯುಕ್ತ ಚಾಲನೆ ನೀಡಿದರು.
ಬಳ್ಳಾರಿಯ ಮೋಕಾ ರಸ್ತೆಯಲ್ಲಿರುವ KRS ಫಂಕ್ಷನ್ ಹಾಲಿನಲ್ಲಿ ಸಚಿವ ನಾಗೇಂದ್ರ, ಶಾಸಕ ಭರತ್ ರೆಡ್ಡಿ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ನಾರಿಶಕ್ತಿ ಲೋಗೋ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಗರದ ಮಹಿಳೆಯರು ಬೃಹತ್ ಪ್ರಮಾಣದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ದ: ಬೆಂಜಮಿನ್ ನೇತನ್ಯಾಹು ಜೊತೆಗೆ ಮೋದಿ ಮಾತುಕತೆ!
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಈ ಯೋಜನೆಯಿಂದ ಸುಮಾರು 1.20 ಕೋಟಿ ಜನರು ಸದುಪಯೋಗ ಪಡೆಯುತ್ತಾರೆ. ಮಹಿಳೆಯರ ಏಳಿಗೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡ ಮಹತ್ತರವಾದ ಯೋಜನೆಯಾಗಿದೆ. ಈ ಹಣದಿಂದ ಸಾಕಷ್ಟು ಮಹಿಳೆಯರಿಗೆ ಸಹಕಾರವಾಗುತ್ತದೆ.
ಈ ಯೋಜನೆಯಿಂದ ಸರ್ಕಾರ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸಾಕಷ್ಟು ಉಪಯೋಗವಾಗುತ್ತದೆ. ಸರ್ಕಾರ ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ನಡೆದಿಕೊಂಡಿದೆ. ಪ್ರತಿಯೊಬ್ಬ ಮಹಿಳೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದರು.