Thursday, May 2, 2024

ಡಿಕೆಶಿ ಬಗ್ಗೆ ನಾಲ್ಕು ಒಳ್ಳೇ ಮಾತು ಹೇಳ್ದೆ, ಅದು ತಪ್ಪಾ? : ST ಸೋಮಶೇಖರ್

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ್ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತು ಹೇಳಿದ್ದೇನೆ. ಅದು ತಪ್ಪಾ‌? ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್​.ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿದ್ದೇನೆ ಅದು ತಪ್ಪಾ? ನಮಗೆ ಎಲ್ಲರ ಮೇಲೂ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಬಂದ ಮೇಲೆ ಎಲ್ಲರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ನನ್ನ ಪ್ರಕಾರ ನೂರಕ್ಕೆ ನೂರರಷ್ಟು ಯಾವ ಬೆಂಬಲಿಗರು ಕಾಂಗ್ರೆಸ್ ಹೋಗಲ್ಲ. ಎಂಎಲ್​ಸಿ ರವಿಕುಮಾರ್ ನನಗೆ ಕರೆದು, ಸಡನ್ ಆಗಿ ಸುದ್ದಿಗೋಷ್ಠಿ ಮಾಡಿದ್ದಾರೆ. ಎರಡೂ ಸುದ್ದಿಗೋಷ್ಠಿಯಲ್ಲಿ ನಾನು ಭಾಗಿಯಾಗಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಪಂಚಾಯತ್ ಎಲೆಕ್ಷನ್ ಇರುವುದರಿಂದ ಬ್ಯುಸಿ ಇದ್ದೆ ಎಂದು ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ನೂರಕ್ಕೆ ನೂರು ಅವ್ರೂ ಹೋಗಲ್ಲ

ಬೆಂಬಲಿಗರು ಕಾಂಗ್ರೆಸ್​ ಪಕ್ಷಕ್ಕೆ ಹೋದ್ರೆ ನಿಮ್ಮ‌ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮುಖಂಡರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಇವತ್ತು ಅದರ ಬಗ್ಗೆ ಮಾತನಾಡಿದ್ದೀನಿ. ನೂರಕ್ಕೆ ನೂರು ಅವರೂ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES