Friday, May 17, 2024

ಈಶ್ವರಪ್ಪ ಕಚೇರಿ ಮುಂದೆ ವಾಮಾಚಾರ, ಇದೆಲ್ಲಾ ಯಡಿಯೂರಪ್ಪ ಕುತಂತ್ರ ಎಂದ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಬಡಾಯ ಅಭ್ಯರ್ಥಿ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ಅವರ ಶಿಕಾರಿಪುರದ ರಾಷ್ಟ್ರಭಕ್ತರ ಬಳಗದ ಕಚೇರಿ ಮುಂಭಾಗ ವಾಮಾಚಾರ ಮಾಡಲಾಗಿದ್ದು ಇದೆಲ್ಲಾ ಯಡಿಯೂರಪ್ಪ ಕುತಂತ್ರ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್​ ಈಶ್ವರಪ್ಪ ಅವರ ಮಗನಿಗೆ ಟಿಕೆಟ್​ ನೀಡದ ಹಿನ್ನೆಲೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಪುತ್ರ, ಸಂಸದ ಬಿ.ವೈ ರಾಘವೇಂದ್ರ ವಿರುದ್ದ ಚುನಾವಣಾ ಅಕಾಡಕ್ಕಿಳಿದಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಅನೇಕ ರಾಜಕೀಯ ಹೈಡ್ರಾಮಗಳು ನಡೆಯುತ್ತಿದೆ.

ಇದನ್ನೂ ಓದಿ: ಪ್ರಜ್ವಲ್‌ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಮನವಿ

ಇದೇ ವಿಚಾರವಾಗಿ ಬಂಡಾಯ ಅಭ್ಯರ್ಥಿ ಕೆ.ಎಸ್​ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಅವರೇ ಈ ವಾಮಾಚಾರವನ್ನು ಮಾಡಿಸಿದ್ದಾರೆ, ಇದರಿಂದ ನನ್ನ ಗೆಲುವು ನಿಲ್ಲಿಸಲು ಸಾಧ್ಯವಿಲ್ಲ, ಮನೆ ಮುಂದೆ ಮಾಡಲಾಗಿರುವ ವಾಮಾಚಾರ ಸ್ಥಳದಲ್ಲಿ ಕಸ ಹೊಡೆದು ಸೈಡಿಗೆ ಹಾಕಿ ನಿಮ್ಮ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ.

ಶಿಕಾರಿಪುರದ ಹೆಸರಾಂತ ಮಾಂತ್ರಿಕರು ಇವರು, ರಾಜ್ಯದಲ್ಲಿ ತಮ್ಮ ಕುಟುಂಬ ರಾಜಕೀಯವಾಗಿ ಬೆಳೆಯಬೇಕು ಎಂದು ಬಲಿಕೊಟ್ಟವರು ಎಂದು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.  ಸದ್ಯ ನಮ್ಮ ಕಚೇರಿಯಲ್ಲಿ ಕೆಲಸಗಳು ಎಂದಿನಂತೆ ಸಾಗುತ್ತಿದೆ, ಯಡಿಯೂರಪ್ಪ ಅವರ ಕುಟುಂಬದ ಆಟ ನಡೆಯಲ್ಲ, ಮತದಾರರು ಯಡಿಯೂರಪ್ಪ ಮಗನನ್ನು ಸೋಲಿಸುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES