ಮಂಡ್ಯ: ದಿನೇ ದಿನೇ ಎಲೆಕ್ಟ್ರಿಕ್ ಸ್ಕೂಟರ್ಗಳು ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತಿರುವ ಕುರಿತು ವರದಿಗಳಾಗುತ್ತಿದೆ. ಇಂಥದ್ದೆ ಒಂದು ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್ಇಎಸ್ ಬಡವಾಣೆಯಲ್ಲಿ ನಡೆದಿದೆ.
ಇದನ್ನೂ ಓದಿ: ಪ್ರಜ್ವಲ್ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಮನವಿ
ಮಳವಳ್ಳಿ ಪಟ್ಟಣದ ಉಮಾಶಂಕರ್ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ ಸ್ಫಟಗೊಂಡಿದೆ. ಉಮಾಶಂಕರ್ ಅವರು ತಮ್ಮ ಶಾಮಿಯಾನದ ಅಂಗಡಿಯಲ್ಲಿ ಸ್ಕೂಟರ್ ಚಾರ್ಜ್ಗೆ ಹಾಕಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಫೋಟದ ಪರಿಣಾದ ಶಾಮಿಯಾನದ ಅಂಗಡಿಯಲ್ಲಿದ್ದ ವಸ್ತುಗಳು ಚೆಲ್ಲಾಲಿಪ್ಪಿಯಾಗಿ ಶಾಮಿಯಾನಗಳು ಬೆಂಕಿಗೆ ಆಹುತಿಯಾಗಿದೆ. ಸ್ಪೋಟಗೊಂಡ ಸ್ಕೂಟರ್ ಸಂಪೂರ್ಣ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿನ ಕಾರ್ಯ ನಡೆದಿದೆ, ಇದೇ ವೇಳೆ ಶಾಮಿಯಾನ ಅಂಗಡಿಯ ಸಿಬ್ಬಂದಿಗಳು ಸುಟ್ಟ ವಸ್ತುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.