Tuesday, May 21, 2024

ನಕಲಿ ಅಲ್ಲ.. ಅಸಲಿ ಎಂದು ನಿರೂಪಿಸಲಿ : ಕೆ.ಜೆ ಜಾರ್ಜ್ ಸವಾಲ್

ಬೆಂಗಳೂರು : ಕಾಂಗ್ರೆಸ್ ಶಾಸಕರ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಆಯೋಜಿಸಿದ್ದ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ವಿಚಾರಕ್ಕೆ ಸಾಕಷ್ಟು ಪ್ಲಾನ್  ಮಾಡಿದ್ದಾರೆ. ಅದರ ಬಗ್ಗೆ ನಮ್ಮ ಸಲಹೆಗಳು ಪಡೆಯಬಹುದು. ಸಮಸ್ಯೆಗಳು ಏನಿವೆ ಎಂದು ಕೇಳಬಹುದು ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಬಗ್ಗೆ ನನ್ನ ಕೇಳಬೇಡಿ. ಅವರು ಪೆನ್​​ಡ್ರೈವ್ ಬಗ್ಗೆ ಮಾಧ್ಯಮಗಳಿಗೆ ಹೇಳಿದ್ದಾರೆ. ಆರೋಪ ಏನು ಎಂದು ಗೊತ್ತಾಗಬೇಕಲ್ಲ. ಕಮಿಷನ್ ಯಾರು ಕೇಳಿದ್ದಾರೆ ಅವರನ್ನು ಹೋಗಿ ಕೇಳಿ. ನಮ್ಮ ಇಲಾಖೆಯಲ್ಲಿ ಗುತ್ತಿಗೆದಾರ ಬಿಲ್ ಕ್ಲಿಯರ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಉತ್ತರ ಕೊಟ್ಟಿದ್ದಾರೆ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ, ಚಲುವರಾಯಸ್ವಾಮಿ ಉತ್ತರ ಕೊಟ್ಟಿದ್ದಾರೆ. ನಕಲಿ ಎಂದು ಈಗಾಗಲೇ  ಹೇಳಿದ್ದಾರೆ. ನಕಲಿ ಅಲ್ಲ ಅಸಲಿ ಎಂದು ನಿರೂಪಿಸಲಿ ಎಂದು ಸಚಿವ ಕೆ.ಜೆ ಜಾರ್ಜ್ ಸವಾಲ್ ಹಾಕಿದ್ದಾರೆ

RELATED ARTICLES

Related Articles

TRENDING ARTICLES