Wednesday, May 22, 2024

25 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ‘ಲೋಕಾ’ ಬಲೆಗೆ ಬಿದ್ದ ಪ್ರಾಂಶುಪಾಲ

ಬೀದರ್ : ಲಂಚ ಸ್ವೀಕರಿಸುತ್ತಿದ್ದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ​ ಶಂಕರ್ ರೆಡ್ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಶೆಟ್ಟಿ ಎಂಬುವವರ ಮಗನಿಗೆ ವಸತಿ ಶಾಲೆಗೆ ಪ್ರವೇಶ ಕೊಡಲು ಶಂಕರ್ ಅವರು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ನಾಗಶೆಟ್ಟಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್​ಪಿ ಓಲೇಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಂಕರ್ ಅವರನ್ನು ರೆಡ್​ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಬಿಟಿಡಿಎ ಕಚೇರಿಗೆ ‘ಲೋಕಾ’ ಭೇಟಿ

ಬಾಗಲಕೋಟೆಯ ನವನಗರದಲ್ಲಿರುವ ಬಿಟಿಡಿಎ(BTDA) ಕಚೇರಿಯಲ್ಲಿ ಸಂತ್ರಸ್ತರ ಕೆಲಸ ವಿಳಂಬ ಹಿನ್ನೆಲೆ ಬಿಟಿಡಿಎ(BTDA)ಕಚೇರಿಗೆ ಲೋಕಾಯುಕ್ತ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್​ಪಿ ಪುಷ್ಪಲತಾ ನೇತೃತ್ವದ ಲೋಕಾಯುಕ್ತ ತಂಡದಿಂದ ಪರಿಶೀಲನೆ ನಡೆಸಲಾಗಿದೆ.

ಲೋಕಾಯುಕ್ತ ತಂಡ ಬಿಟಿಡಿಎ(BTDA) ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್​ಪಿ ಪುಷ್ಪಲತಾ.ಎನ್ ನೇತೃತ್ವದಲ್ಲಿ 7 ಜನರ ತಂಡ ಭೇಟಿ ನೀಡಿದೆ. ಲೋಕಾಯುಕ್ತ ಡಿವೈಎಸ್​ಪಿ ಪುಷ್ಪಲತಾ ಮತ್ತು ತಂಡ ಬಾಕಿ ಉಳಿಸಿಕೊಂಡ ಕಡತಗಳ ಬಗ್ಗೆ ವಿಚಾರಣೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES