Friday, April 26, 2024

ಬಜೆಟ್​ನಲ್ಲಿ ರೈತರಿಗೆ ಬಂಪರ್​ ಗಿಪ್ಟ್

ದೆಹಲಿ : ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ರೈತರಿಗೆ ಬಂಪರ್​ ಗಿಪ್ಟ್ ನೀಡಿದ್ದಾರೆ. ರೈತರಿಂದ 1200 ಲಕ್ಷ ಮೆಟ್ರಿಕ್​ ಟನ್ ​ಗೋಧಿ, ಭತ್ತ ಖರೀದಿಗೆ ಒತ್ತು. 2.37 ಲಕ್ಷ ಕೋಟಿ ವೆಚ್ಚದಲ್ಲಿ ಗೋಧಿ, ಭತ್ತ ಖರೀದಿ. ಗಂಗಾ ನದಿ ಸುತ್ತ-ಮುತ್ತ 5 ಕಿಮೀ. ವ್ಯಾಪ್ತಿಯಲ್ಲಿ ಸಾವಯುವ ಕೃಷಿಗೆ ಒತ್ತು ನೀಡಲಾಗಿದೆ. ಎಣ್ಣೆ, ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎಸ್‌,ಎಸ್‌ಟಿ ರೈತರಿಗೆ ಆರ್ಥಿಕ ನೆರವು. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ. ಅರಣ್ಯ ಕೃಷಿ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುವುದು.

‘ಹರ್​-ಘರ್​ ನಲ್- ಜಲ್​’ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗುವುದು. 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ.  ಒಟ್ಟು 7.5 ಕೋಟಿ ಮನೆಗಳಿಗೆ ನೀರು ಪೂರೈಕೆಯ ಗುರಿಯನ್ನು ಹೊಂದಲಾಗಿದೆ. ನಳ್​ ಯೋಜನೆಗೆ 60 ಸಾವಿರ ಕೋಟಿ ಮೀಸಲಿಡಲಾಗಿದೆ.

2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿಯನ್ನು ಹೊಂದಲಾಗಿದೆ. ಪಿಎಂ ಆವಾಸ್​ ಯೋಜನೆಗೆ 48 ಸಾವಿರ ಕೋಟಿ ಅನುದಾನ ಬಿಡುಗಡೆ. ಈಶಾನ್ಯ ಭಾರತಕ್ಕೆ 1,500 ಕೋಟಿ ಅನುದಾನ ಬಿಡುಗಡೆ. ಒನ್‌ ನೇಷನ್ ಒನ್‌ ರಿಜಿಸ್ಟ್ರೇಷನ್‌ ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್‌ ವ್ಯವಸ್ಥೆ ಜಾರಿ. ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ಜಾರಿ. 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಏಕರೂಪದ ವ್ಯವಸ್ಥೆ ಜಾರಿ

RELATED ARTICLES

Related Articles

TRENDING ARTICLES