ಹಾಸನ: ಆಟ ಆಡುವಾಗ ಕಣ್ಮರೆಯಾಗಿದ್ದ 12 ವರ್ಷದ ಬಾಲಕನನ್ನು ಚಿರತೆ ಹೊತ್ತೊಯ್ದಿದೆ ಎಂಬ ಆತಂಕಕ್ಕೊಳಗಾಗಿದ್ದ ಪೋಷಕರಿಗೆ ಶಾಕ್ ಎದುರಾಗಿದೆ. ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ರೈಲ್ವೆ ಹಳಿಗಳ ಮಧ್ಯೆ ಪತ್ತೆಯಾಗಿದೆ.
ಚಿಕ್ಕಹೊನ್ನೇನಹಳ್ಳಿ ಗ್ರಾಮದ ವೆಂಕಟೇಶ ರೂಪ ದಂಪತಿಯ ಪುತ್ರ ಕುಶಾಲ್ (12) ಕೊಲೆಯಾದ ಬಾಲಕ, ಮಂಗಳವಾರ ಸಂಜೆ ಗ್ರಾಮದಲ್ಲಿ ಮಕ್ಕಳ ಜೊತೆ ಕಣ್ಣಾಮುಚ್ಚಾಲೆ ಆಟವಾಡ್ತಿದ್ದ ಕುಶಾಲ್, ಬಚ್ಚಿಟ್ಟುಕೊಳ್ಳಲು ಹೋಗಿ ಮತ್ತೆ ವಾಪಾಸ್ ಬಾರದ ಹಿನ್ನೆಲೆ ಹುಟುಕಾಟ ನಡೆಸಿದ್ದಾರೆ. ಬಳಿಕ ಚಿರತೆ ಹೊತ್ತೊಯ್ದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಮಂಗಳವಾರ ಪೂರಾ ಶೋಧ ನಡೆಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆ ಪಕ್ಕದಲ್ಲೇ ಯುವಕರಿಂದ ವೀಲ್ಹಿಂಗ್ ಪುಂಡಾಟ
ಇಂದು ಮಧ್ಯಾಹ್ನದ ವೇಳೆಗೆ ಬಾಲಕನ ಮೃತ ದೇಹವು ರೈಲ್ವೆ ಹಳಿಗಳ ನಡುವೆ ಪತ್ತೆಯಾಗಿದೆ. ಬಾಲಕನ ಮೃತದೇಹವು ಕಂಡು ಪೊಲೀಸರು ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅನುಮಾನ ಬಾರದಂತೆ ರೈಲು ಅಪಘಾತವೆಂದು ಬಿಂಬಿಸಲು ಶವವನ್ನು ರೈಲ್ವೆ ಟ್ರ್ಯಾಕ್ ಬಳಿ ಎಸೆದು ಹೋಗಿರೊ ಸಾಧ್ಯತೆ ಇದೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಘಟನೆಯೂ ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು, ಬೆರಳಚ್ಚು ತಜ್ಞರಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.