Monday, May 6, 2024

ಚಲಿಸುತ್ತಿದ್ದ ಸಾರಿಗೆ ಬಸ್​ ಚಕ್ರದಲ್ಲಿ ಬೆಂಕಿ!

ಹಾಸನ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಸಾರಿಗೆ ಬಸ್​ ಟೈಯರ್​ನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊಂಡಿರುವ ಘಟನೆ ಜಿಲ್ಲೆಯ ಬೇಲೂರು ಬಳಿ ನಡೆದಿದೆ.

ಬೆಂಗಳೂರಿನಿಂದ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ತೆರಳುತ್ತಿದ್ದ ಕೆಎ-18 ಎಫ್​- 0973 ನಂಬರ್​ ನ ಕೆಎಸ್​ಆರ್​ಟಿಸಿ ಬಸ್ ಟೈಯರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಇದನ್ನು ಗಮನಿಸಿದ ಬಸ್​ ನಿರ್ವಾಹಕ ಕೂಡಲೇ ಬಸ್ ಚಾಲಕನ ಗಮನಕ್ಕೆ ತಂದಿದ್ದಾರೆ, ತಕ್ಷಣವೇ ಚಾಲಕ ಬಸ್​​ನ್ನು ನಿಲ್ಲಿಸಿ ಸ್ಥಳೀಯರ ನೆರವಿನಿಂದ ಬಸ್​ ಚಾಲಕ ಮತ್ತು ನಿರ್ವಾಹಕ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಗೆ ಬೇಸಿಗೆಯ ಬಿಸಿಲೇ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನೇಹ ಕೊಲೆ ಪ್ರಕರಣ: 5 ದಿನಕ್ಕೂ ಮೊದಲೇ ಚಾಕು ಖರೀದಿಸಿ ಇಟ್ಟಿದ್ದ ಫಯಾಜ್​

ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ, ಸದ್ಯ ಘಟನೆಯಿಂದ ಆತಂಕಕ್ಕೊಳಗಾದ ಪ್ರಯಾಣಿಕರು ಬೇರೆ ಬಸ್​ ಹತ್ತಿ ಪ್ರಯಾಣಿಸಿದ್ದಾರೆ.

RELATED ARTICLES

Related Articles

TRENDING ARTICLES