ಹಾಸನ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಸಾರಿಗೆ ಬಸ್ ಟೈಯರ್ನಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊಂಡಿರುವ ಘಟನೆ ಜಿಲ್ಲೆಯ ಬೇಲೂರು ಬಳಿ ನಡೆದಿದೆ.
ಬೆಂಗಳೂರಿನಿಂದ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ತೆರಳುತ್ತಿದ್ದ ಕೆಎ-18 ಎಫ್- 0973 ನಂಬರ್ ನ ಕೆಎಸ್ಆರ್ಟಿಸಿ ಬಸ್ ಟೈಯರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಇದನ್ನು ಗಮನಿಸಿದ ಬಸ್ ನಿರ್ವಾಹಕ ಕೂಡಲೇ ಬಸ್ ಚಾಲಕನ ಗಮನಕ್ಕೆ ತಂದಿದ್ದಾರೆ, ತಕ್ಷಣವೇ ಚಾಲಕ ಬಸ್ನ್ನು ನಿಲ್ಲಿಸಿ ಸ್ಥಳೀಯರ ನೆರವಿನಿಂದ ಬಸ್ ಚಾಲಕ ಮತ್ತು ನಿರ್ವಾಹಕ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಗೆ ಬೇಸಿಗೆಯ ಬಿಸಿಲೇ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನೇಹ ಕೊಲೆ ಪ್ರಕರಣ: 5 ದಿನಕ್ಕೂ ಮೊದಲೇ ಚಾಕು ಖರೀದಿಸಿ ಇಟ್ಟಿದ್ದ ಫಯಾಜ್
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ, ಸದ್ಯ ಘಟನೆಯಿಂದ ಆತಂಕಕ್ಕೊಳಗಾದ ಪ್ರಯಾಣಿಕರು ಬೇರೆ ಬಸ್ ಹತ್ತಿ ಪ್ರಯಾಣಿಸಿದ್ದಾರೆ.