Saturday, May 18, 2024

ಸಿದ್ದೇಶ್ವರ್ ಹೆಂಡ್ತಿ ಅಡುಗೆ ಮಾಡ್ಕೊಂಡಿದ್ದೋರು, ಅವ್ರು ಏನು ಮಾತಾಡ್ತಾರೆ : ಸಿದ್ದರಾಮಯ್ಯ ಎಡವಟ್ಟು

ದಾವಣಗೆರೆ : ಸಿದ್ದೇಶ್ವರ್ ಹೆಂಡ್ತಿ ಅಡುಗೆ ಮಾಡಿಕೊಂಡಿದ್ದೋರು, ಅವ್ರು ಏನು ಮಾತನಾಡ್ತಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

ಹರಿಹರದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಪ್ರಜಾಧ್ವನಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾಂಗ್ರೆಸ್​ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚನೆ ಮಾಡಿದರು. ತಮ್ಮ ಅಭ್ಯರ್ಥಿಯೂ ಒಬ್ಬ ಮಹಿಳೆ ಎಂಬುವುದನ್ನು ಮರೆತು, ಮಾತಿನ ಭರದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಕಳೆದ ಬಾರಿ ಬಿಜೆಪಿಯ 25 ಜನರನ್ನು ರಾಜ್ಯದ ಜನ ಗೆಲ್ಲಿಸಿದ್ದಾರೆ. ಸಂಸತ್​ನಲ್ಲಿ ನಿಮ್ಮ ಪರವಾಗಿ ಬಾಯಿ ಬಿಟ್ಟಿದ್ದಾರಾ? ತುಟಿ ಅಂಟಿಸಿಕೊಳ್ಳುತ್ತಿದ್ದರು. ದಾವಣಗೆರೆ ಸಂಸದ ಸಿದ್ದೇಶ್ವರ್ ಸಹ ಮಾತನಾಡಿಲ್ಲ. ಇನ್ನೂ ಅವರ ಹೆಂಡ್ತಿ ಅಡುಗೆ ಮಾಡಿಕೊಂಡಿದ್ದೋರು ಏನು ಮಾತನಾಡ್ತಾರೆ. ಎಲ್ಲಾ ಬಿಜೆಪಿ ಎಂಪಿಗಳಿಗೆ ಆಡಳಿತ ವಿರೋಧಿ ಅಲೆ ಇದೆ‌‌ ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗಲ್ಲ. ಬಿಜೆಪಿ ಸೋಲೋದು ಗ್ಯಾರಂಟಿ. ನರೇಂದ್ರ ಮೋದಿ 10 ವರ್ಷ ಏನು ಮಾಡಿದ್ದಾರೆ ಹೇಳಿ ನೋಡೋಣ. ಅವರು ಮಾಡಿರೋದು ಅಂಬಾನಿ, ಅದಾನಿಗೆ. ರೈತರ ಸಾಲ ಮನ್ನಾ ಮಾಡಲಿಲ್ಲ. ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಸಂವಿಧಾನ ಓದಿಕೊಂಡಿಲ್ಲ

ನರೇಂದ್ರ ಮೋದಿ ಸಂವಿಧಾನ ಓದಿಕೊಂಡಿದ್ದಾರೋ ಇಲ್ವೋ ಗೊತ್ತಿಲ್ಲ. ನರೇಂದ್ರ ಮೋದಿ ಸಂವಿಧಾನ ಓದಿಕೊಂಡಿಲ್ಲ. ಒಟ್ಟು ಮೀಸಲಾತಿ ಹೆಚ್ಚಳ ಮಾಡಿ ಕೊಡ್ತಿವಿ ಅಂತ ಹೇಳಿದ್ದೇವೆ. ದಲಿತರ ಮೀಸಲಾತಿ ಕಿತ್ತು ಕೊಡ್ತಿವಿ ಅಂತ ಎಲ್ಲಿ ಹೇಳಿದ್ದೇವೆ. ಹೇಳಿದ್ದರೆ ಟೀಕೆ ಮಾಡೋದು ಬಿಟ್ಟು ಬಿಡ್ತಿನಿ. ಆರ್​ಎಸ್​ಎಸ್ ಯಾವತ್ತಾದರೂ ಮೀಸಲಾತಿಗೆ ಬೆಂಬಲಿಸಿದ್ದಾರಾ? ಮೀಸಲಾತಿ ಬಗ್ಗೆ ಮಾತನಾಡೋಕೆ ಇವರಿಗೆ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES