ಬೆಂಗಳೂರು : ಅಯ್ಯೋ ದೇವರೇ, ನೀನು ಯಾಕಿಷ್ಟು ಕ್ರೂರಿ! ಎಲ್ಲ ನೀನೇ ಕೊಡ್ತಿಯಾ . ಆದರೆ, ಇಂಥ ಕಷ್ಟವನ್ನು ದಯವಿಟ್ಟು ಯಾರಿಗೂ ಕೊಡಬೇಡ.
ಇದು ಪುಟ್ಟ ಕಂದನನ್ನು ಕಳೆದುಕೊಂಡ ಪೋಷಕರ ರೋಧನೆ. ರಾಜಧಾನಿ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಆಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
ತಂದೆಯೇ ಚಲಾಯಿಸುತ್ತಿದ್ದ ಕಾರು ಹರಿದು ಮಗು ಸಾವನ್ನಪ್ಪಿದೆ. ಏಪ್ರಿಲ್ 21ರ ರಾತ್ರಿ 11.30ಕ್ಕೆ ಘಟನೆ ನಡೆದಿದೆ. ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ.
ಈ ಸುದ್ದಿ ಓದಿದ್ದೀರಾ? : ಹನುಮ ಜಯಂತಿಯಂದೇ ಘೋರ ದುರಂತ : ಮೂವರು ಹನುಮ ಮಾಲಾಧಾರಿಗಳು ಸಾವು
ಸಂಬಂಧಿಗಳ ಮದುವೆಗೆ ಎಂದು ಚನ್ನಪಟ್ಟಣಕ್ಕೆ ಹೋಗಿದ್ದ ಕುಟುಂಬ ವಾಪಸ್ ಆಗಿತ್ತು. ಕಾರಿನಿಂದ ಇಳಿದು ಎಲ್ಲರೂ ಮನೆ ಒಳಗೆ ಹೋಗಿದ್ದರು. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ.
ಕಾರಿನಲ್ಲಿದ್ದ ಲಗೇಜ್ ಮನೆಯೊಳಗೆ ಇಡುತ್ತಿದ್ದಾಗ ಮಗು ಕಾರಿನ ಡೋರ್ ಬಳಿಯೇ ನಿಂತಿತ್ತು. ಆದರೆ, ಇದನ್ನು ತಂದೆ ಗಮನಿಸಿರಲಿಲ್ಲ. ಲಗೇಜ್ ತೆಗೆದು ಕಾರು ಚಾಲನೆ ಮಾಡಿದ ಸಂದರ್ಭ ಆಕಸ್ಮಿಕವಾಗಿ ಕಾರು ಮಗು ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.