Saturday, May 4, 2024

ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ‌ ನೀರು ಪಾಲು

ದೊಡ್ಡಬಳ್ಳಾಪುರ : ಮೀನು ಹಿಡಿಯಲು ಹೋಗಿ ವ್ಯಕ್ತಿ‌ ನೀರು ಪಾಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದ ಪಾಲನಜೋಗಹಳ್ಳಿ‌ ಕೆರೆಯಲ್ಲಿ ನಡೆದಿದೆ.

ಪ್ರಕಾಶ್ ಮೃತ ದುರ್ದೈವಿ. ನಿನ್ನೆ ಏ.21ರಂದು ಭಾನುವಾರ ಮೀನು ಹಿಡಿಯಲು ಸ್ನೇಹಿತನ ಜೊತೆ
ಪ್ರಕಾಶ್ ಬಂದಿದ್ದ. ಈ ವೇಳೆ ಒಂದು ಮೀನು ಸಿಕ್ಕಿದೆ. ಮತ್ತೊಂದು ಮೀನು ಹಿಡಿಯಲು ಕೆರೆಯ ಅರ್ಧಭಾಗಕ್ಕೆ ಹೋಗಿದ್ದಾ‌ನೆ. ಈ ವೇಳೆ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಜಮೀನು ವಿವಾದ : ಚಿಕ್ಕಪ್ಪನಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಗ

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು ತಡರಾತ್ರಿಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಿತ್ತು. ಇಂದು ಬೆಳಗ್ಗೆ ಮತ್ತೆ ಮೃತದೇಹ ಪತ್ತೆ ಕಾರ್ಯನನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಈ ಘಟನೆಯೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES