Friday, May 3, 2024

ಜಮೀನು ವಿವಾದ : ಚಿಕ್ಕಪ್ಪನಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಗ

ಆನೇಕಲ್​ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಮಗನೇ ಚಿಕ್ಕಪ್ಪನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ರಾಜ್ಯ ಗಡಿಭಾಗದ ತಮಿಳುನಾಡಿನ ಕಾವೇರಿ ಪಟ್ಟಣಂ ಸಮೀಪದ ಚಂದಾಪುರ ಗ್ರಾಮದಲ್ಲಿ ನಡೆದಿದೆ.

55 ವರ್ಷದ ಚಿನ್ನವನ್​ ಎಂಬಾತ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. 25 ವರ್ಷದ ಸೆಂಥಿಲ್ ಚಿಕ್ಕಪ್ಪನಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ATM ನಲ್ಲಿ ಅಗ್ನಿ ಅವಘಡ, 5 ಲಕ್ಷ ಹಣ ಭಸ್ಮ

ಘಟನೆಯ ಹಿನ್ನೆಲೆ :

ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಸೆಂಥಿಲ್ ಜಮೀನಿಗೆ ಚಿನ್ನವನ್ ಅವರ ಜಮೀನಿನ ಮೂಲಕವೇ ಓಡಾಡಬೇಕಿತ್ತು ಎನ್ನಲಾಗಿದೆ. ಆದರೆ ತನ್ನ ಜಮೀನಿನಲ್ಲಿ ಓಡಾಡಬಾರದೆಂದು ಚಿನ್ನವನ್ ಕುಟುಂಬ ಅಡ್ಡಿ ಪಡಿಸಿತ್ತು ಎನ್ನಲಾಗಿದೆ. ಈ ಸಂಬಂಧ ಕಳೆದ ನವೆಂಬರ್ 19ನೇ ತಾರೀಖಿನಂದು ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿತ್ತುಎನ್ನಲಾಗಿದೆ. ಆ ಬಳಿಕ ಸೆಂಥಿಲ್ ಕುಟುಂಬ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪರಿಹಾರಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ. ಆದರೆ ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಿಗದೆ ಚಿನ್ನವನ್ ಕುಟುಂಬ ಪರಾರಿಯಾಗಿತ್ತು ಎನ್ನಲಾಗಿದೆ.

ಈ ನಡುವೆ ನಿನ್ನೇ ಕಾವೇರಿಪಟ್ಟಣಂನ ಅಂಗಡಿ ಸಮೀಪ ಚಿನ್ನವನ್ ಎದುರಾಗಿದ್ದಾರೆ. ಈ ವೇಳೆ ವಾಟರ್ ಬಾಟಲ್ ನಲ್ಲಿ ಪೆಟ್ರೋಲ್ ತಂದಿದ್ದ ಸೆಂಥಿಲ್, ನಡುರಸ್ತೆಯಲ್ಲಿ ಚಿನ್ನವನ್ ಮೇಲೆ ಪೆಟ್ರೋಲ್ ಎರಚಿ ನೋಡನೋಡುತ್ತಿದ್ದಂತೆ ಬೆಂಕಿ ಹಚ್ಚಿದ್ದಾನೆ.

ಈ ವೇಳೆ ಅಲ್ಲಿನ ಜನರು ಸೆಂಥಿಲ್ ನನ್ನು ಹಿಡಿಯಲು ಮುಂದಾಗಿದ್ದು, ಆದರೆ ಅವರನ್ನು ಪಕ್ಕಕ್ಕೆ ತಳ್ಳಿ ಆಕ್ರೋಶಗೊಂಡಿದ್ದ ಸೆಂಥಿಲ್ ತನ್ನ ಚಿಕ್ಕಪ್ಪ ಚಿನ್ನವನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಧಗಧಗನೆ ಹೊತ್ತಿಉರಿಯುತ್ತಿದ್ದ ಬೆಂಕಿಯಲ್ಲಿ ಚಿನ್ನವನ್ ನರಳಾಡುತ್ತಿದ್ದ ದೃಶ್ಯಗಳು ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕಾವೇರಿಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES