ಶಿವಮೊಗ್ಗ : ಒಂದು ಕಡೆ ದುಷ್ಟ ಕಾಂಗ್ರೆಸ್, ಇನ್ನೊಂದು ಕಡೆ ಅನಿಷ್ಟ ಯಡಿಯೂರಪ್ಪ. ಇಬ್ಬರನ್ನು ಚುನಾವಣೆಯಲ್ಲಿ ಮುಗಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಧರ್ಮವನ್ನು ಉಳಿಸುವಂತಹ ನರೇಂದ್ರ ಮೋದಿಗೆ ಕೈ ಎತ್ತಿ. ನನ್ನನ್ನು ಗೆಲ್ಲಿಸಲೇಬೇಕೆಂದು ಮನವಿ ಮಾಡಿ. ಮೊನ್ನೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಾವು 5-10 ಸಾವಿರ ಜನ ಬರಬಹುದು ಎಂದುಕೊಂಡಿದ್ದೆವು. ಆದರೆ 35 ಸಾವಿರ ಜನ ಬಂದಿದ್ದನ್ನು ನೋಡಿ ಟಿವಿ ಒಡೆದು ಹಾಕಿದ್ರು ಅಂತ ಸುದ್ದಿ ಬಂತು.
ಇದನ್ನೂ ಓದಿ: ಡಿಕೆ ಶಿವಕುಮಾರ್, ಕುಮಾರಸ್ವಾಮಿ, ವಿಜಯೇಂದ್ರ ವಿರುದ್ದ FIR ದಾಖಲು
ಪಾಪ ಟಿವಿ ಏನ್ ಮಾಡುತ್ತೆ? ಎಷ್ಟು ಜನ ಬಂದಿದ್ರು ಅದನ್ನು ತೋರಿಸುತ್ತೆ. ಜನ ಬಂದಿದ್ದು ಅವರಿಗೇನು ತೊಂದರೆ ಆಗುತ್ತೋ? ಏನೂ ನನಗೇನು ಗೊತ್ತಾಗಲಿಲ್ಲ ಎಂದು ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ದ ಕಿಡಿಕಾರಿದರು.