Friday, May 3, 2024

ಹೆಣ್ಣು ಮಕ್ಕಳಿಗೆ ಕೈಗೆ ಸರ್ಕಾರ ಎಕೆ 47 ಗನ್ ಕೊಡಬೇಕು : ವೀರೇಶ್ವರ ಶ್ರೀ

ಯಾದಗಿರಿ : ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ದಾಸವಾಳ ಮಠದ ವೀರೇಶ್ವರ ಸ್ವಾಮಿಜಿ ಖಂಡಿಸಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಹೆಣ್ಣು ಮಕ್ಕಳ ಕೈಗೆ (ಬ್ಯಾಗ್‍ನಲ್ಲಿ) ರಾಜ್ಯ ಸರ್ಕಾರ ಎಕೆ 47 ಗನ್ ಕೊಡಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಏನೇ ಮಾಡಿದರೂ ಒಂದು ವರ್ಷ ಅಥವಾ 6 ತಿಂಗಳು ಜೈಲಿನಲ್ಲಿರುತ್ತಾರೆ. ಬಳಿಕ ಜಾಮೀನಿನ ಮೇಲೆ ಬರುತ್ತೇವೆ ಎಂದು ಆರೋಪಿಗಳಿಗೆ ಮನದಟ್ಟಾಗಿದೆ. ಆರೋಪಿಯನ್ನು ಪೊಲೀಸರು ಹೇಗೆ ಪೊಲೀಸ್​ ಠಾಣೆಗೆ ಕರೆತಂದರೋ ಅದೇ ರೀತು ಸ್ಮಶಾನಕ್ಕೆ ಕರೆದುಕೊಂಡ ಹೋಗಬೇಕು ಎಂದು ತಿಳಿಸಿದ್ದಾರೆ.

ದೈಹಿಕ ಸಾಮರ್ಥ್ಯದ ತರಬೇತಿ ಕೊಡಬೇಕು

ಪೋಷಕರು ಹೆಣ್ಣು ಮಕ್ಕಳ ಹಿಂದೆ ರಕ್ಷಣೆಗೆ ಹೋಗಲು ಆಗುವುದಿಲ್ಲ. ಶಿಕ್ಷಣ ಸಂಸ್ಥೆಯವರು ಸಹ ಹೆಣ್ಣು ಮಕ್ಕಳಿಗೆ ಭದ್ರತೆ ಕೊಡಲು ಆಗುತ್ತಾ? ಹೀಗಾಗಿ, ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ ದೈಹಿಕ ಸಾಮರ್ಥ್ಯದ ತರಬೇತಿ ಕೊಡಬೇಕು. ಇದಕ್ಕಾಗಿ ಒಂದು ತರಗತಿ ಮೀಸಲಿಡಬೇಕು ಎಂದು ವೀರೇಶ್ವರ ಸ್ವಾಮಿಜಿ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES