Friday, May 3, 2024

ಪ್ರೇಯಸಿಯನ್ನ ಊರಿಗೆ ಕಳಿಸಿದಕ್ಕೆ ಪೋಷಕರ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ

ರಾಯಚೂರು : ಪ್ರೀತಿ ಹೆಸರಲ್ಲಿ ಕಿರುಕುಳ ಕೊಡುತ್ತಿದ್ದ ಹಿನ್ನೆಲೆ, ಮಗಳನ್ನು ಊರಿಗೆ ಕಳಿಸಿದ್ದ ಪೋಷಕರ ಮೇಲೆ ಪಾಗಲ್​ ಪ್ರೇಮಿಯೊಬ್ಬ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಣವ್ ಮತ್ತು ಸಹಚರರು ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್.ಹೆಚ್. ಕ್ಯಾಂಪ್ 3ರಲ್ಲಿ ಘಟನೆ ನಡೆದಿದೆ.

ಏಪ್ರಿಲ್ 14ರಂದು ಘಟನೆ ನಡೆದಿದೆ. ಪೋಷಕರು ಮಗಳನ್ನು ಬೇರೆ ಮಾಡಿ ಊರಿಗೆ ಕಳಿಸಿದ್ದೇ ಕಾರಣವಾಗಿಟ್ಟುಕೊಂಡು ಯುವಕ ಹಲ್ಲೆ ಮಾಡಿದ್ದಾನೆ. ಯುವಕನಿಗೆ ಯುವತಿ ಸಂಪರ್ಕಕ್ಕೆ ಸಿಗದಿದ್ದಾಗ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಹೀರಾರಾ ಮೋಹನ್, ತಾಯಿ ಶ್ರುತಿ ಮಂಡಲ್ ಮತ್ತು ಸಹೋದರ ಹಿಮಾಂಶು, ಸಂಬಂಧಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಹೀರಾ ಮೋಹನ್ ಕಣ್ಣಿಗೆ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ್ದಾರೆ. ಯುವತಿ ತಾಯಿಯ ಸೀರೆ ಎಳೆದಾಡಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಗ್ರಾಮದಲ್ಲಿ ಅಟ್ಟಾಡಿಸಿ ಯುವತಿಯ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರೇಯಸಿಯನ್ನು ಮತ್ತೆ ಕರೆದುಕೊಂಡು ಬನ್ನಿ

ಯುವತಿಯನ್ನು ಮತ್ತೆ ಕರೆದುಕೊಂಡು ಬನ್ನಿ ಎಂದು ಹೇಳಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

RELATED ARTICLES

Related Articles

TRENDING ARTICLES