ಶಿವಮೊಗ್ಗ: ನಾಳೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ದಾರೆ ಮಾತ್ರ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಪ್ಪ, ಮಕ್ಕಳ ಕೈಯಲ್ಲಿ ಪಕ್ಷ ಹಿಡಿತದಲ್ಲಿದೆ.ಅಪ್ಪ, ಮಕ್ಕಳಿಂದ ಕಾರ್ಯಕರ್ತರು ನೊಂದಿದ್ದಾರೆ. ಬಿಜೆಪಿ ಶುದ್ಧೀಕರಣ ಮಾಡಿ ಎಂದು ತಿಳಿಸಿದ್ದೇನೆ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿ ನಾನು ಚುನಾವಣೆಗೆ ನಿಲ್ಲೋದಿಲ್ಲ.ಉದ್ದೇಶದಲ್ಲಿ ಯಾವ ಬದಲಾವಣೆ ಆಗಲ್ಲ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದ ಈಶ್ವರಪ್ಪ ಹೇಳಿದ್ದಾರೆ.
10 ವರ್ಷಗಳಿಂದ ಯಡಿಯೂರಪ್ಪಗೆ ನಮ್ಮ ಮನೆ ನೆನಪಾಗಲಿಲ್ಲ
10 ವರ್ಷಗಳಿಂದ ಯಡಿಯೂರಪ್ಪಗೆ ನಮ್ಮ ಮನೆ ನೆನಪಾಗಲಿಲ್ಲ.ಈಗ ನಮ್ಮ ಮನೆ ಇವರಿಗೆ ಹೇಗೆ ನೆನಪಾಯ್ತಾ? ಸುಳ್ಳಿನ ಸರದಾರ. ರಂಗನ ಮನೆಗೆ ಹೋಗಿದ್ದೇನೆ ಎಂದಾಗ ಸಿಂಗನ ಮನೆಗೆ ಯಾಕ್ ಹೋಗಬೇಕು.ಎಂಪಿಯವರು ಎಲ್ಲಾ ಕಾರ್ಯಕರ್ತರ ಮನೆಗೆ ಹೋಗುತ್ತಿದ್ದಾರೆ.ಯಾವಾಗ ಅವರು ಎಲ್ಲರ ಮನೆಗೆ ಹೋಗಿದ್ರು? ನಾನು ಚುನಾವಣೆಗೆ ನಿಂತಾಗ ಎಲ್ಲರ ಮನೆಗೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.