Sunday, May 5, 2024

ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ: ಕೆಎಸ್​ ಈಶ್ವರಪ್ಪ

ಶಿವಮೊಗ್ಗ: ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಅಮಿತಾ ಶಾ ನನಗೆ ಕಾಲ್​ ಮಾಡಿದ್ದಾಗ ಹೇಳಿದ್ದೇನೆ ಎಂದು ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ ಅಂತಾ ಹೇಳಿದ್ದೀನಿ.ನಿಮ್ಮ ಮಗನ ಭವಿಷ್ಯ ಬಗ್ಗೆ ಯೋಚನೆ ಮಾಡಿ ಅಂತಾ ಹೇಳಿದ್ದಾರೆ.ನೀವು ಇಷ್ಟು ಹಿರಿಯರಿದ್ದೀರಿ ಯಾಕೆ ಚುನಾವಣೆಗೆ‌ ನಿಂತಿದ್ದೀರಾ ಅಂತಾ ಕೇಳಿದ್ದರು.ಅಪ್ಪ ಮಕ್ಕಳ ವ್ಯವಸ್ಥೆ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೇನೆ ಅಂತಾ ಹೇಳಿದ್ದೀನಿ .ಹಿಂದುತ್ವ ಪರ ಹೋರಾಟ ಮಾಡಿದ್ದೇ ತಪ್ಪಾ ಅಂತಾ ಅವರಿಗೆ ಹೇಳಿದ್ದೀನಿ ಎಂದರು.

ಹಿಂದುಳಿದ ವರ್ಗಕ್ಕೆ ಯಾಕೆ ಸಿಗಲಿಲ್ಲ ಅಂತಾ ಕೇಳಿದ್ದಾರೆ ಅಂತಾ ಹೇಳಿದ್ದೇನೆ.ಅವರು ವಾಪಸ್ಸು ತೆಗೆದುಕೊಳ್ಳಿ ಅಂತಾ ಹೇಳಿದ್ರು.ನೀವು ಹೇಳಿದ ಹಾಗೇ ಆಗುತ್ತದೆ ಅಂತಾ ಹೇಳಿದ್ರು.ನಾನು ನಿಮ್ಮ ಬಳಿ ಬಂದು ಮಾತಾನಾಡಿದ್ರು ಪ್ರಯೋಜನ ಆಗಿಲ್ಲ ಅಂತಾ ನಾಳೆಗೆ ದೆಹಲಿಗೆ ಬನ್ನಿ ಹೇಳಿದ್ದಾರೆ.ದೆಹಲಿಗೆ ಬರ್ತೇನೆ ಅಂತಾ ಹೇಳಿದ್ದೇನೆ.ಸೂಚನೆ ಕೊಡಲ್ಲ,ಪ್ರಾರ್ಥನೆ ಮಾಡ್ತೇನೆ ಅಂತಾ ಹೇಳಿದ್ರು ನನ್ನ ವಿಚಾರ ಅವರಿಗೆ ಒಪ್ಪಿಸಿ ಬರ್ತಿನಿ ಎಂದರು.

ಅಮಿತ್​ಶಾಗೆ ಗೌರವ ಕೊಟ್ಟು ದೆಹೆಲಿಗೆ ಹೋಗ್ತೇನೆ

ಅಮಿತ್​ಶಾಗೆ ನನ್ನ ವಿಚಾರ ಒಪ್ಪಿಸುತ್ತೇವೆ.ದೊಡ್ಡವರು ಕರೆದಾಗ ಸೊಕ್ಕು ಮಾಡಬೇಕಾ.ಹಾಗಾಗಿ ಹೋಗ್ತಾ ಇದ್ದೀನಿ ಎಂದರು.

ನಾಳೆ ಬೆಳಿಗ್ಗೆ ರಾಜ್ಯಾಧ್ಯಕ್ಷ ಬದಲಾವಣೆ ಮಾಡಿದ್ರೆ ಚುನಾವಣೆ ಗೆ ನಿಲ್ಲೋಲ್ಲ

ರಾಜ್ಯ ಮಧ್ಯ ಮರಣ ಬದಲಾವಣೆ ನಾಳೆನೇ ನಾನು ಚುನಾವಣೆ ಗೆ ನಿಲ್ಲೋಲ್ಲ ನನ್ನ ಉದ್ದೇಶ ಅಮಿತ್ ಶಾ ಹೇಳಿ ಬರ್ತೇನಿ ಎಂದರು.

RELATED ARTICLES

Related Articles

TRENDING ARTICLES