Saturday, April 27, 2024

ನಾವು ಯುದ್ದಕ್ಕೆ ಸಿದ್ದ.. ಶಸ್ತ್ರ ತ್ಯಾಗ ಮಾಡಲ್ಲ, ಯುದ್ದ ಮಾಡೇ ಮಾಡ್ತೀವಿ : ಮುನಿಯಪ್ಪ ಪುತ್ರಿ ರೂಪಕಲಾ

ಬೆಂಗಳೂರು : ನಮ್ಮ‌ ಪಕ್ಷ ಯುದ್ದಕ್ಕೆ ಸಿದ್ದವಾಗಿದೆ. ಶಸ್ತ್ರ ತ್ಯಾಗ ಮಾಡಲ್ಲ, ಯುದ್ದ ಮಾಡೇ ಮಾಡ್ತೀವಿ. ಯಾರನ್ನು ಆಯ್ಕೆ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಮುನಿಯಪ್ಪ ಪುತ್ರಿ ಹಾಗೂ ಶಾಸಕಿ ರೂಪಕಲಾ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕುಟುಂಬಕ್ಕಿಂತ ನಮಗೆ ಪಕ್ಷವೇ ಮುಖ್ಯ. ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ದ ನಾವು. ಪಕ್ಷದ ವಿರುದ್ಧ ಧ್ವನಿ ಎತ್ತಲ್ಲ ನಮ್ಮ ಕುಟುಂಬ. ನಾವು ಯಾವತ್ತು ಪಕ್ಷ ತಲೆತಗ್ಗಿಸುವ ಕೆಲಸ ಮಾಡಲ್ಲ ಎಂದು ತಿಳಿಸಿದರು.

ರಾಜಕೀಯದಲ್ಲಿ ಒಂದೊಂದು ಕುಟುಂಬದ ವಿರುದ್ಧ ಭಿನ್ನಾಭಿಪ್ರಾಯ ಬರೋದು ಸಹಜ. ಇಷ್ಟು ವರ್ಷ ರಾಜಕಾರಣ ಮಾಡಿದ ಕುಟುಂಬ, ಎಲ್ಲರನ್ನು ನಮ್ಮ ಪರ ಇಟ್ಟುಕೊಳ್ಳೋಕಾಗಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಮಾಡೋರು ಬೇಕು. ಅದು ತಪ್ಪಲ್ಲ. ಆದ್ರೆ, ಆ ವಿರೋಧ ಪಕ್ಷದ ಇತಿಮಿತಿಯಲ್ಲಿ ಇರಬೇಕು. ಪಕ್ಷದೊಳಗಿನ ವೇದಿಕೆಯಲ್ಲಿ ಮಾತನಾಡಬೇಕು. ಪಕ್ಷದ ಹಿರಿಯರು AICC ಅಧ್ಯಕ್ಷರು ಸಿಎಂ, ಡಿಸಿಎಂ ಇದ್ದಾರೆ, ಅವರಿಗೆ ಹೇಳಬೇಕು ಎಂದು ಕುಟುಕಿದರು.

ದ್ವೇಷದಿಂದ ಮುಗಿಸ್ತೀವಿ ಅಂದ್ಕೊಂಡಿದ್ದಾರೆ

ನಿನ್ನೆಯ ವಿಧಾನಸೌಧದ ಹೈಡ್ರಾಮಾ ವಿಚಾರವಾಗಿ ಮಾತನಾಡಿ, ನಿನ್ನೆ ಪಕ್ಷದ ವಿರುದ್ಧ ನಡೆದುಕೊಳ್ಳುವ ಕೆಲಸ ನಡೆದಿದೆ, ಅದು ಆಗಬಾರದಿತ್ತು. ಕೋಪ, ಅಸೂಯೆ, ದ್ವೇಷದಿಂದ ಒಬ್ಬರನ್ನು ಮುಗಿಸ್ತೀವಿ ಅಂದ್ಕೊಂಡಿದ್ದಾರೆ. ದೇವರಿಗಿಂತ ಯಾರು ದೊಡ್ಡವರಲ್ಲ, ನಾವು ಜನಗಳ ಆಶೀರ್ವಾದದಿಂದ ಗೆದ್ದು ಬರ್ತೀವಿ. ನಮ್ಮ ತಂದೆಯವರು 5 ವರ್ಷದಿಂದ ಹೇಳ್ತಿದ್ದರು, ಕುತಂತ್ರ ನಡಿತಿದೆ ಅಂತ. ಯಾವುದೋ ಒಂದು ವಿಚಾರ ಇಟ್ಕೊಂಡು ಪಕ್ಷಕ್ಕೆ ಮುಜುಗರ ತರೋದು ಒಳ್ಳೆಯದಲ್ಲ ಎಂದು ಶಾಸಕಿ ರೂಪಕಲಾ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES