ಬೆಂಗಳೂರು: ಸುಮಲತಾ ನನಗೆ ಏನು ಶಾಶ್ವತ ಶತ್ರುನಾ? ಎಂದು ಹೆಚ್ಡಿ ಕುಮಾರಸ್ವಾಮಿ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಲವು ಭಿನ್ನಾಭಿಪ್ರಾಯ ಆಗೋದು ಇರೋದು ರಾಜಕೀಯದಲ್ಲಿ ಸಹಜ.ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ಇಲ್ಲ ಅವರು ಕೂಡ ನನಗೆ ಆಶೀರ್ವಾದ ಮಾಡಿದ್ದಾರೆ.ನಾವೇನು ಶಾಶ್ವತ ಶತ್ರುಗಳಲ್ಲ ಎಂದು ಹೇಳಿದ್ದಾರೆ.
ಮೋದಿ ಅವರು ಮತ್ತು ದೇವೇಗೌಡರು ಒಂದು ಸಮಾವೇಶದಲ್ಲಿ ಒಟ್ಟಿಗೆ ಭಾಗಿ ಆಗಲಿದ್ದಾರೆ. ಆ ಬಗ್ಗೆ ಇನ್ನು ಚರ್ಚೆ ಆಗ್ತಾ ಇದೆ.ಒಂದು ಸಮಾವೇಶದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಇರ್ತಾರೆ ಎಂದು ಹೇಳಿದ್ದರು.
ಬೆಂಗಳೂರು ಗ್ರಾಮಾಂತರದ ಜವಾಬ್ದಾರಿಯನ್ನು ಅಶೋಕ್ ಅವರಿಗೆ ನೀಡಿದ್ದೇವೆ ಎಂದು ನಗೆ ಬೀರಿದ ಕುಮಾರಸ್ವಾಮಿ
28 ಕ್ಕೆ 28 ಕ್ಷೇತ್ರ ಗೆಲ್ಲುವ ಪ್ಲಾನ್ ಮಾಡಿದ್ದೇವೆ.
ತಳ ಮಟ್ಟದಲ್ಲಿ ಕಾರ್ಯಕರ್ತರು ಒಟ್ಟಾಗಿ ಹೋಗಿದ್ದಾರೆ.ತೇಜಸ್ವಿ ಸೂರ್ಯ ಜೆಪಿ ಭವನಕ್ಕೆ ಬಂದು ಸಭೆ ಮಾಡಿದ್ದಾರೆ. ಮೈಸೂರುನಲ್ಲಿ ಸಭೆ ಮಾಡಿದ್ದೇವೆ.ನಮ್ಮ ಗುರಿ 28 ಕ್ಕೆ 28 ಕ್ಷೇತ್ರ ಗೆಲ್ಲುವುದು ಎಂದರು.
ಪ್ರಜ್ವಲ್ ರೇವಣ್ಣ ಈಗಾಗಲೇ ನಾಮಿನೇಶನ್ ಹಾಕಿದ್ದಾರೆ.ಮತ್ತೊಮ್ಮೆ ಹಾಕ್ತಾರೆ ಎಂದು ಹೇಳಿದರು.ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳು ಮೈಸೂರಲ್ಲಿ ಸಭೆ ಮಾಡಿದ್ದಾರೆ. ಅದೇನೋ ವಾಯುವಿಹಾರ ಕೂಡ ಮಾಡಿದ್ದಾರೆ.ಮೂರು ದಿನ ಸಭೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸಭೆಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.