ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ನಾಲ್ವರು ಸಾವನ್ನಪ್ಪಿರುವ ಘಟನೆ
ಮಳವಳ್ಳಿಯ ಮುತ್ತತ್ತಿಯ ಕಾವೇರಿ ನದಿಯ ಬಳಿ ನಡೆದಿದೆ.
ಮೈಸೂರು ನಗರದ ವಿದ್ಯಾರಣ್ಯಪುರಂನ ನಾಗೇಶ್(55), ಭರತ್(17), ಗುರುಕುಮಾರ್(32) ಮತ್ತು ಮಹದೇವ(14) ಮೃತ ದುದೈವಿಗಳು.
ಘಟನೆಯ ವಿವರ
ಧಾರ್ಮಿಕ ಕಾರ್ಯಕ್ರಮಕ್ಕೆಂದು ಸುಮಾರು 50 ಜನರು ಬಸ್ನಲ್ಲಿ ಮುತ್ತತ್ತಿಗೆ ಬಂದಿದ್ದಾರೆ. ಕಾವೇರಿ ನದಿಯಲ್ಲಿ ಈಜಾಡುವ ವೇಳೆ ನೀರಿನಲ್ಲಿ ಒಬ್ಬ ಮುಳುಗಿದ್ದಾನೆ.ನಂತರ ರಕ್ಷಣೆಗೆ ಹೋದ ಮೂವರು ಸೇರಿ ನಾಲ್ವರು ನೀರು ಪಾಲಾಗಿದ್ದಾರೆ.
ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.