Sunday, May 5, 2024

ಈಶ್ವರಪ್ಪ ನಿಮಗೆ ಗಂಡಸ್ತನ ಇಲ್ವಾ? : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಜಾತಿ ಮೇಲೆ ರಾಜಕಾರಣ ಮಾಡಿ ಹೊಲಸು ಮಾಡಿರುವ ಈಶ್ವರಪ್ಪನವರಿಗೆ ಗಂಡಸ್ತನ ಇದಿದ್ದರೆ ಅವರ ಮಗನಿಗೆ ಟಿಕೆಟ್ ಕೊಡಿಸಬೇಕಿತ್ತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಶ್ವರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತ ಶಿವರಾಜ್​ಕುಮಾರ್​ ಅವರಗೆ ಈಶ್ವರಪ್ಪ ಡಮ್ಮಿ ಎಂಬ ಪದ ಬಳಕೆ ಮಾಡಿರುವ ಕುರಿತು ಶಿವಮೊಗ್ಗದಲ್ಲಿ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದರು, ಈಶ್ವರಪ್ಪ ನವರಿಗೆ ಬಸ್​ ನಿಲ್ದಾಣದಲ್ಲಿ ಜಾತಕ ಹೇಳ್ತಾ ಕೂರೋಕೆ ಹೇಳಿ, ನಮಗೆ ಡಮ್ಮಿ ಎನ್ನುತ್ತಿದ್ದಾರೆ ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಲಿ.

ಇದನ್ನೂ ಓದಿ: ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ರಾಜಕೀಯ ‌ಸ್ಟಂಟ್ : ಶೆಟ್ಟರ್​

ಈಶ್ವರಪ್ಪಗೆ ಪೊಲಿಟಿಕಲ್ ಸುಫಾರಿ ಯಡಿಯೂರಪ್ಪ ಕೊಟ್ಟಿರಬಹುದು ಇವರೆಲ್ಲಾ ಜಾತಿ ಮೇಲೆ ರಾಜಕಾರಣ ಮಾಡಿ ಹೊಲಸು ಮಾಡಿರುವವರು, ಈಶ್ವರಪ್ಪನವರಿಗೆ ಗಂಡಸ್ತನ ಇದಿದ್ದರೆ ಅವರ ಮಗನಿಗೆ ಟಿಕೆಟ್​ ಕೊಡಿಸ್ಬೇಕಿತ್ತು, ಈಶ್ವರಪ್ಪಗೆ ಗೀತಕ್ಕನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ ಎಂದರು.

ಬ್ಲಾಕ್​ ಮೇಲ್ ಈಶ್ವರಪ್ಪಗೆ ದೆಹಲಿಯಿಂದ ಒಂದು ಕರೆ ಬಂದ್ರೆ ಸೈಲೆಂಟ್ ಆಗ್ತಾರೆ, ಈಶ್ವರಪ್ಪನವರೇ ಗೌರವದಿಂದ ಇರಿ, ಗೌರವದಿಂದ ನಡೆದುಕೊಳ್ಳಿ ನಿಮ್ಮ ಮಗನಿಗಾಗಿ ಈಗ ಬೀದಿಗೆ ಇಳಿದಿದ್ದೀರಾ ಬೇರೆಯವರಿಗೆ ಡಮ್ಮಿ ಅನ್ನೋದು ಬಿಡಬೇಕು, ಬೇರೆಯವರಿಗೆ ಡಮ್ಮಿ, ಕಮ್ಮಿ ಎನ್ನಬಾರದು ನಾಚಿಕೆಯಾಗಬೇಕು ನಿಮ್ಗೆ ಎಂದು ಚೀಮಾರಿ ಹಾಕಿದರು.

RELATED ARTICLES

Related Articles

TRENDING ARTICLES