Friday, May 3, 2024

ಹಣಕ್ಕಾಗಿ ಬಾಲಕಿ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ ದೊಡ್ಡಮ್ಮ!

ತುಮಕೂರು: ಹಣಕ್ಕಾಗಿ ತಾಯಿ ಇಲ್ಲದ ಮಗುವಿಗೆ ತನ್ನ ದೊಡ್ಡಮ್ಮನೇ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಿಂಸೆ ನೀಡಿರುವ ಅಮಾನವೀಯ ಘಟನೆ ಶಿರಾ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ನಡೆದಿದೆ.

ನಂಜಮ್ಮ ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಮಹಿಳೆ, ಬಾಲಕಿ ಲಕ್ಷ್ಮಿ, ಬ್ಯಾಂಕ್​ ಖಾತೆಯಲ್ಲಿದ್ದ 4 ಲಕ್ಷ ರೂಗಳ ಹಣವನ್ನು ಬಿಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿ ಬಾಲಕಿ ತೊಡೆಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ ನೀಡಿದ್ದಾಳೆ, ಈ ಕೃತ್ಯಕ್ಕೆ ನಂಜಮ್ಮನ ಮಗ ಬಸವರಾಜ ಇಸ್ತ್ರಿಪೆಟ್ಟಿಗೆಯಿಂದ ಸುಡುವಾಗ ಬಾಲಕಿ ಕಿರುಚಾಡದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ನಂಜಮ್ಮನಿಗೆ ಸಾಥ್ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Challenging star Darshan: ಪವಿತ್ರಾ ಗೌಡ ಕೈಮೇಲೆ 777 ಟ್ಯಾಟೂ!, ಏನಿದರ ಸೀಕ್ರೆಟ್​?

ಬಾಲಕಿಯ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು, ಸಾಯುವುದಕ್ಕು ಮುನ್ನ ತನ್ನ ಮಗಳಾದ ಲಕ್ಷ್ಮಿ ಭವಿಷ್ಯಕ್ಕಾಗಿ ಬ್ಯಾಂಕ್​ ಖಾತೆಯಲ್ಲಿ ನರಸಮ್ಮ ಜಂಟಿ ಖಾತೆ ಮಾಡಿಸಿ 4 ಲಕ್ಷ ಹಣವನ್ನು ಇಟ್ಟಿದ್ದರು.

ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮಕ್ಕೆ ಬಂದಿದ್ದ ನಂಜಮ್ಮ, ಶಿವರಾತ್ರಿ ಹಿನ್ನೆಲೆ ಕಳೆದ ಶನಿವಾರ ಬಾಲಕಿಯನ್ನು ಶಿರಾ ತಾಲೂಕಿನ ನಿಡಘಟ್ಟ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಬಾಲಕಿ ಬ್ಯಾಂಕ್ ಖಾತೆಯಲ್ಲಿ ನಾಲ್ಕು ಲಕ್ಷ ಹಣವಿರುವ ವಿಚಾರ ತಿಳಿದುಬಂದಿದೆ. ಈ ಹಣಕ್ಕಾಗಿ ಬಾಲಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ, ಬಳಿಕ ಬಿಸಿ ಬಿಸಿ ಟೀ ಮೈಲೆ ಚೆಲ್ಲಿಕೊಂಡು ಗಾಯವಾಗಿದೆ ಎಂದು ಎಲ್ಲರ ಬಳಿ ಹೇಳಿಕೊಂಡಿದ್ದಾಳೆ.

ಇನ್ನು ಬಾಲಕಿ ಲಕ್ಷ್ಮಿ 5 ನೇ ತರಗತಿ ಓದುತ್ತಿದ್ದು ಪರೀಕ್ಷೆ ಸಮಯದಲ್ಲಿ ಪರೀಕ್ಷೆಗೆ ಹಾಜರಾಗದೆ ಇದ್ದದ್ದು ಕಂಡು ಶಿಕ್ಷಕರು ಲಕ್ಷ್ಮಿ ಬಗ್ಗೆ ವಿಚಾರಿಸಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ, ಈ ವೇಳೆ ಕಾರಣ ಕೇಳಿದ ಶಿಕ್ಷಕರಿಗೆ ಅಸಲಿ ಸತ್ಯ ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES