Sunday, April 28, 2024

ಗೀತಾ ಶಿವಮೊಗ್ಗದಲ್ಲೇ ಹುಟ್ಟಿರೋದು, ಅಭಿಮಾನಿ ದೇವರ ಆಶೀರ್ವಾದ ಇರಲಿ : ಶಿವಣ್ಣ ಮನವಿ

ದಾವಣಗೆರೆ : ಶಿವಮೊಗ್ಗ ಬಗ್ಗೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಏನು ಗೊತ್ತಿಲ್ಲ ಎಂಬ ಆರೋಪಕ್ಕೆ ಪತಿ ಹಾಗೂ ನಟ ಶಿವರಾಜ್​ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೀತಾ ಶಿವರಾಜ್​ಕುಮಾರ್ ಶಿವಮೊಗ್ಗದಲ್ಲೇ ಹುಟ್ಟಿರೋದು. ಯಾವಾಗಲೂ ಶಿವಮೊಗ್ಗಕ್ಕೆ ಹೋಗಿ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಗೀತಾ ಅವರ ಅಪ್ಪ ಸಿಎಂ ಆಗಿದ್ದವರು. ಅವರಿಗೆ ಅಲ್ಲಿನ ಸಮಸ್ಯೆ ಬಗ್ಗೆ ಗೊತ್ತಿದೆ. ಅವರ ಸಹೋದರ ಮಧು ಬಂಗಾರಪ್ಪ ಸಹ ರಾಜಕೀಯದಲ್ಲೇ ಇರೋದು. ಗೀತಾ ಶಿವರಾಜ್​ಕುಮಾರ್ ಅವರಿಗೆ ಶಿವಮೊಗ್ಗದ ಸಮಸ್ಯೆ ಬಗ್ಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳೇ ನಮ್ಮ ಮನೆಗೆ ಬರುತ್ತಿದ್ದರು

ಗೀತಾ ಅವರ ಕುಟುಂಬ ರಾಜಕಾರಣಿಗಳ ಕುಟುಂಬ. ನಮ್ಮ ಕುಟುಂಬ ಕೂಡ ರಾಜಕಾರಣ ಹೊರತಾಗಿ ಇಲ್ಲ. ನಮ್ಮ ತಂದೆಯವರು ಇದ್ದಾಗ ರಾಜಕಾರಣಿಗಳೇ ಮನೆಗೆ ಬರುತ್ತಿದ್ದರು. ಗೀತಾ ಶಿವರಾಜ್​ಕುಮಾರ್ ಅವರ ಚುನಾವಣೆ ಸಿದ್ಧತೆ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅಭಿಮಾನಿ ದೇವರ ಆಶೀರ್ವಾದ ಇರಲಿ

ಶಿವಮೊಗ್ಗದಲ್ಲಿ ಎರಡು ಸಿಎಂ ಫ್ಯಾಮಿಲಿಗಳ ನಡುವೆ ಚುನಾವಣೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಬಿಜೆಪಿ ಭದ್ರಕೋಟೆ ಎಂದು ಹೇಳುತ್ತಾರೆ. ಆದರೆ, ಈಗ ಅದೆಲ್ಲ ಇಲ್ಲ. ಯಾವ ಭದ್ರಕೋಟೆಗಳು ಕೂಡ ಬದಲಾಗುತ್ತದೆ. ಈ ಬಾರಿ ಅಭಿಮಾನಿ ದೇವರ ಆಶೀರ್ವಾದ ಇರಲಿ ಎಂದು ನಟ ಶಿವರಾಜ್​ಕುಮಾರ್ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES