Tuesday, April 30, 2024

ಬಸ್​ ಚಕ್ರದ ಕೆಳಗೆ ಮಲಗಿ ಕೆಎಸ್​ಆರ್​ಟಿಸಿ ಚಾಲಕ ಹೈಡ್ರಾಮ: ಜನ ಆಕ್ರೋಶ!

ಕೊಪ್ಪಳ : ಬಸ್​ ನಿಲ್ಲಿಸಿ ಎಂದಿದ್ದಕ್ಕೆ ಕೆಎಸ್​ಆರ್​ಟಿಸಿ ಚಾಲಕನೋರ್ವ ಸಾರ್ವಜನಿಕರ ಜೊತೆ ವಾಗ್ವಾದಕ್ಕಿಳಿದು ಬಸ್​ ಚಕ್ರದ ಕೆಳಗೆ ಮಲಗಿ ಅತಿರೇಕದ ವರ್ತನೆ ತೋರಿರುವ ಘಟನೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಪಾಕ್​ ಪರ ಘೋಷಣೆ: ಕಾಂಗ್ರೆಸ್ ಜಿನ್ನಾ ಸಂಸ್ಕೃತಿ ಮುಂದುವರಿಸುತ್ತಿದೆ: ಕೆ.ಎಸ್ ಈಶ್ವರಪ್ಪ

ಮರಳಿ ಗ್ರಾಮದಲ್ಲಿ ಬಸ್​ ನಿಲ್ದಾಣವಿದ್ದರು ನಿತ್ಯ ಈ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಸರ್ಕಾರಿ ಬಸ್​ ಚಾಲಕರು ಬಸ್​ ನಿಲ್ಲಿಸದೇ ಸಾಗುತ್ತಿರುವುದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಬಸ್​ ಅಡ್ಡಗಟ್ಟಿ ಚಾಲಕನನ್ನು ಪ್ರಶ್ನಿಸಿದ್ದಾರೆ. ಕೆಲಕಾಲ ಸಾರ್ವಜನಿಕರೊಡನೆ ವಾಗ್ವಾದಕ್ಕಿಳಿದ ಬಸ್​ ಚಾಲಕ ಕೋಪಗೊಂಡು ಬಸ್​ ಚಕ್ರದ ಕೆಳಗೆ ಮಲಗಿ ಹೈಡ್ರಾಮ ಮಾಡಿದ್ದಾನೆ. ಚಾಲಕನ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಶಕ್ತಿಯೋಜನೆಯಿಂದಾಗಿ ನಿತ್ಯ ಅತಿಹೆಚ್ಚು ಜನರ ಪ್ರಯಾಣದಿಂದ ಚಾಲಕರು ಹಾಗು ನಿರ್ವಾಹಕರು ಮಾನಸಿಕವಾಗಿ ಕುಗ್ಗುಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

RELATED ARTICLES

Related Articles

TRENDING ARTICLES