ಕೊಪ್ಪಳ : ಬಸ್ ನಿಲ್ಲಿಸಿ ಎಂದಿದ್ದಕ್ಕೆ ಕೆಎಸ್ಆರ್ಟಿಸಿ ಚಾಲಕನೋರ್ವ ಸಾರ್ವಜನಿಕರ ಜೊತೆ ವಾಗ್ವಾದಕ್ಕಿಳಿದು ಬಸ್ ಚಕ್ರದ ಕೆಳಗೆ ಮಲಗಿ ಅತಿರೇಕದ ವರ್ತನೆ ತೋರಿರುವ ಘಟನೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ: ಕಾಂಗ್ರೆಸ್ ಜಿನ್ನಾ ಸಂಸ್ಕೃತಿ ಮುಂದುವರಿಸುತ್ತಿದೆ: ಕೆ.ಎಸ್ ಈಶ್ವರಪ್ಪ
ಮರಳಿ ಗ್ರಾಮದಲ್ಲಿ ಬಸ್ ನಿಲ್ದಾಣವಿದ್ದರು ನಿತ್ಯ ಈ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಸರ್ಕಾರಿ ಬಸ್ ಚಾಲಕರು ಬಸ್ ನಿಲ್ಲಿಸದೇ ಸಾಗುತ್ತಿರುವುದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಬಸ್ ಅಡ್ಡಗಟ್ಟಿ ಚಾಲಕನನ್ನು ಪ್ರಶ್ನಿಸಿದ್ದಾರೆ. ಕೆಲಕಾಲ ಸಾರ್ವಜನಿಕರೊಡನೆ ವಾಗ್ವಾದಕ್ಕಿಳಿದ ಬಸ್ ಚಾಲಕ ಕೋಪಗೊಂಡು ಬಸ್ ಚಕ್ರದ ಕೆಳಗೆ ಮಲಗಿ ಹೈಡ್ರಾಮ ಮಾಡಿದ್ದಾನೆ. ಚಾಲಕನ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಶಕ್ತಿಯೋಜನೆಯಿಂದಾಗಿ ನಿತ್ಯ ಅತಿಹೆಚ್ಚು ಜನರ ಪ್ರಯಾಣದಿಂದ ಚಾಲಕರು ಹಾಗು ನಿರ್ವಾಹಕರು ಮಾನಸಿಕವಾಗಿ ಕುಗ್ಗುಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.