Friday, April 26, 2024

ಉದಯೋನ್ಮುಕ ನಟನ ಭೀಕರ ಹತ್ಯೆ

ಬೆಂಗಳೂರು : ಸ್ಯಾಂಡಲ್​​​ವುಡ್​​ನಲ್ಲಿ ಲಗೋರಿ ಎಂಬ ಸಿನಿಮಾದಲ್ಲಿ‌ ನಟಿಸಿದ್ದ ಸತೀಶ್ ಬರ್ಬರ ಹತ್ಯೆಯಾದ ಘಟನೆ ಆರ್.ಆರ್.ನಗರ ಠಾಣ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ನಡೆದಿದೆ.

ಸತೀಶ್ ವಜ್ರ ಕೊಲೆಯಾದ ದುರ್ದೈವಿ ಮನೆಯಲ್ಲೇ ಚಾಕುವಿನಿಂದ ಇರಿದು ಸತೀಶ್ ಹತ್ಯೆ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸ್ಯಾಂಡಲ್ ವುಡ್ ನಲ್ಲಿ ಲಗೋರಿ ಎಂಬ ಸಿನಿಮಾದಲ್ಲಿ‌ ನಟಿಸಿದ್ದ ಸತೀಶ್ ಇವತ್ತು ಮನೆಯಲ್ಲೇ ಇರಿದು ಸತೀಶ್ ಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು, ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರ ಭೇಟಿ ನೀಡಿದ್ದು, ಸಹನಟನಾಗಿ ಚಿತ್ರರಂಗದಲ್ಲಿ ನಟಿಸುತ್ತಿದ್ದ ಸತೀಶ್ ಸಹೋದರಿ ಆತ್ಮಹತ್ಯೆಗೆ ಕಾರಣ ಸತೀಶನೇ ಎಂಬ ಕಾರಣಕ್ಕೆ ಹತ್ಯೆ ನಡೆದಿರುವ ಸಾಧ್ಯತೆ ಇದೆ. ಒಂದು ವರ್ಷದ ಹಿಂದೆ ಮದ್ವೆಯಾಗಿದ್ದ. ಹುಡುಗಿಯ ಸಹೋದರನಿಂದಲೇ ಕೊಲೆಯಾಗಿದ್ದು, ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES