Tuesday, May 21, 2024

ನಾಡಿನ ಜನತೆಗೆ ಹೊಸ ವರುಷದ ಶುಭಾಶಯ ಕೋರಿದ : ಸಿಎಂ ಬೊಮ್ಮಾಯಿ

ಬೆಂಗಳೂರು : ಹೊಸ ವರುಷದ ಸಂದರ್ಭದಲ್ಲಿ ಕರ್ನಾಟಕ ಸವಾಲುಗಳಿಂದ ಮುಕ್ತವಾಗಿ ಜನರ ಬದುಕು ಹಸನಾಗಿ 2022ರ ಹೊಸ ವರ್ಷ ಎಲ್ಲರಿಗೂ ಹರುಷ ತರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.

ಹೊಸ ಭರವಸೆಯೊಂದಿಗೆ ನೂತನ ವರ್ಷವನ್ನ ಸ್ವಾಗತಿಸೋಣ, ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಿ ಎಲ್ಲರೂ ಕೊವಿಡ್​ ನಿಯಮಗಳನ್ನ ತಪ್ಪದೇ ಪಾಲಿಸಿ ಆರೋಗ್ಯವಾಗಿರೋಣ ಎಂದು ನಾಡಿನ ಜನರಿಗೆ ಹೇಳಿದ್ದಾರೆ.

 ಹೊಸ ಚೈತನ್ಯ ಹಾಗೂ ಹೊಸ ದಿಕ್ಸೂಚಿಯೊಂದಿಗೆ ಅಧಿಕಾರಿಗಳು ಇನ್ನಷ್ಟು ಜನಸ್ನೇಹಿಯಾಗಿ ಆಡಳಿತ ನಡೆಸುವ ಚಿಂತನೆಯಲ್ಲಿ ಸಭೆಯನ್ನು ಕರೆಯಲಾಗಿದೆ ಎಂದರು. ಈ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನ ಸ್ವಾಗತಿಸೋಣ ಎಂದು ,ಟ್ವೀಟ್​ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೂಲಕ ಶುಭಕೋರಿದ್ದಾರೆ.

RELATED ARTICLES

Related Articles

TRENDING ARTICLES