Monday, October 28, 2024

“ಹೊಸಕೋಟೆಯಲ್ಲಿ ಬಿಜೆಪಿ ಕಟ್ಟಿ, ಬೆಳೆಸಿದ್ದು ನಾವು” : ಯಡಿಯೂರಪ್ಪ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ..!

ಹೊಸಕೋಟೆ : ಮುಖ್ಯಮಂತ್ರಿ ಯಡಿಯೂರಪ್ಪ, ಎಂಎಲ್​ಸಿ ಎಂಟಿಬಿ ನಾಗರಾಜ್​ ವಿರುದ್ಧ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡ ವಾಗ್ದಾಳಿ ನಡೆಸಿದ್ದಾರೆ.

ಸದ್ದಿಗಾರರೊಂದಿಗೆ ಮಾತನಾಡಿದ ಅವರುಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ  ಕಟ್ಟಿ ಬೆಳಿಸಿದ್ದು ನಾವು. ಅದನ್ನ ಯಡಿಯೂರಪ್ಪ ತಿಳಿದುಕೊಳ್ಳಬೇಕು. ಇವತ್ತು ದುಡ್ಡು ಮತ್ತು ಅವಕಾಶವನ್ನು ಬಳಸಿಕೊಂಡು ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಬಂಡವಾಳ ಹೂಡಿ ಎಂಟಿಬಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಡವಾಳ ಅಲ್ಲಿ ಸೇರಿದೆ.. ಯಾವ ರೀತಿ ಅನ್ನೋದು ಸಹ ನನಗೆ ಗೊತ್ತಿದೆ ಅದನ್ನ ನಾನು ಹೇಳುವುದಕ್ಕೆ ಹೋಗುವುದಿಲ್ಲ. ಸುಮ್ಮನೆ ಎಂಟಿಬಿ ನಾಗರಾಜ್ ಹೋಗಿಲ್ಲ ಬಂಡವಾಳ ಹೂಡಿ ಹೋಗಿರುವುದು,  ಎಂಎಲ್​ಸಿ ಆಗಿರುವುದು. ಆದ್ರೆ ಶರತ್ ಬಚ್ಚೇಗೌಡ ಹಿಂದಿನ ಬಾಗಿಲಿನಿಂದ ಹೋಗಿಲ್ಲ. ಮತದಾರರ ಮತ ಪಡೆದು  ಶಾಸಕನಾಗಿರುವುದು ಎಂದು ಕಿಡಿಕಾರಿದರು. 

ಹೊಸಕೋಟೆ ತಾಲ್ಲೂಕಿನ ರಾಜಕಾರಣ ಶುರು ಮಾಡಿದ್ದು ಎಂಟಿಬಿ ನಾಗರಾಜ್. ನಮ್ಮ ಕುಟುಂಬ ಅನೇಕ ವರ್ಷಗಳಿಂದ ಹೊಸಕೋಟೆ ತಾಲ್ಲೂಕು ಕಟ್ಟಿ ಬೆಳೆಸಿದ್ದೇವೆ. ನಮ್ಮ ವಿರುದ್ಧ ವ್ಯಕ್ತಿಗತವಾಗಿ ಮಾತನಾಡುವುದನ್ನ ಬಿಡಬೇಕು. ಇನ್ನೂ ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರದ ಮತದಾರನೇ ಅಲ್ಲ. ಗರುಡಚಾರ್ ಪಾಳ್ಯದಿಂದ ಬಂದು ಇಲ್ಲಿ ಅಭಿವೃದ್ಧಿ ಮಾಡಿದ್ದೇನೆ ಅಂತಾ ಸುಳ್ಳು ಹೇಳುತ್ತಿದ್ದಾರೆ ಎಂದು ಬಿ.ಎನ್ ಬಚ್ಚೇಗೌಡ ಹರಿಹಾಯ್ದಿದ್ದಾರೆ.

– ರಾಮಾಂಜಿ.ಎಂ ಬೂದಿಗೆರೆ ದೇವನಹಳ್ಳಿ

RELATED ARTICLES

Related Articles

TRENDING ARTICLES