ಬೆಂಗಳೂರು : ಆಗಸ್ಟ್ 2ನೇ ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ರು. ಆದರೆ, ಸದ್ಯ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆಯಾಗಲಿ ಇಲ್ಲ.
ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಒಪ್ಪಿದೆ. ಆದರೆ, ಅವರಿಬ್ಬರ ಜೊತೆಗೆ ಉಳಿದ ಸ್ಥಾನಗಳನ್ನೂ ಬರ್ತಿ ಮಾಡುವುದಾದರೆ ಸ್ವಲ್ಪ ಕಾಯಿರಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಹೈಕಮಾಂಡ್ ಈ ನಿರ್ಧಾರದಿಂದ, ಸದ್ಯ ಅವರಿಬ್ಬರನ್ನೇ ಮಂತ್ರಿಗಳನ್ನಾಗಿ ಮಾಡಿದ್ರೆ ಸ್ವಪಕ್ಷೀಯರ ಅಸಮಧಾನಕ್ಕೆ ಕಾರಣವಾಗಲಿದೆ. ಹಾಗಾಗಿ ಬಿಎಸ್ವೈ ಸದ್ಯಕ್ಕೆ ಸಂಪುಟ ವಿಸ್ತರಣೆಯನ್ನು ಕೈಬಿಟ್ಟಿದ್ದು, ಹೈಕಮಾಂಡ್ ಗ್ರೀನ್ ಸಿಗ್ನಲ್ ಬರೋವರೆಗೆ ಕಾಯಲಿದ್ದಾರೆ.