ಬೆಂಗಳೂರು : ಮಂಗಳವಾರ ಸಂಜೆಯಿಂದ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್ ಡವನ್ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಸಿಎಂ ಭೇಟಿ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ‘’ಬೆಂಗಳೂರು ಬಿಟ್ಟು ಹೋಗುವವರು ನಾಳೆಯೇ ಹೋಗಲಿ ಅದಕ್ಕಾಗಿಯೇ ಲಾಕ್ಡೌನ್ ಮಂಗಳವಾರದಿಂದ ಮಾಡಿದ್ದೇವೆ ಕಳೆದ ಬಾರಿ ಆದ ಎಡವಟ್ಟು ಈ ಬಾರಿ ಆಗದಂತೆ ಜನರು ತಮ್ಮ ಊರುಗಳಿಗೆ ತೆರಳಲಿ , ಸದ್ಯ 7 ದಿನ ಮಾತ್ರ ಬೆಂಗಳೂರಲ್ಲಿ ಲಾಕ್ಡೌನ್ ಇರುತ್ತೆ ಬೆಂಗಳೂರಲ್ಲಿ ಲಾಕ್ಡೌನ್ ವಿಸ್ತರಣೆ ಕೂಡ ಆಗಬಹುದು’’ ಎಂದು ಹೇಳಿಕೆ ನೀಡಿದರು.