Monday, October 28, 2024

ಕೊವಿಡ್ ಮೆಡಿಕಲ್​ ಕಿಟ್​​​​​​ ವಿಚಾರದಲ್ಲಿ ಹಗರಣ ನಡೆದಿಲ್ಲ – ಆರ್ ಅಶೋಕ್

ಬೆಂಗಳೂರು : ಕೊವಿಡ್ ಮೆಡಿಕಲ್​ ಕಿಟ್​​​​​​ ವಿಚಾರದಲ್ಲಿ ಹಗರಣ ನಡೆದಿಲ್ಲ ಎಂದು ಆರ್ . ಅಶೊಕ್ ವಿಧಾನಸೌಧದಲ್ಲಿ ​ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಮಾಜಿ ಸಿ.ಎಂ  ಸಿದ್ದರಾಮಯ್ಯನವರು ಮೆಡಿಕಲ್ ಕಿಟ್ ವಿಚಾರದಲ್ಲಿ ದೊಡ್ಡ ಪ್ರಮಾಣದ ಹಗರಣವಾಗಿದೆ. ಜನರಿಗೆ ಸುಳ್ಳು ಮಾಹಿತಿ ನೀಡಿ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರನ್ನು ಆಡಳಿತ ಪಕ್ಷದವರು ಯಾಮಾರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್ ಅಶೊಕ್  ‘’ಸಿದ್ದರಾಮಯ್ಯ ಆರೋಪ ಮಾಡ್ತಿದ್ದಾರೆ ಹೊರತು ದಾಖಲೆ ಕೊಡ್ತಿಲ್ಲ. ಹಗರಣದ ಬಗ್ಗೆ ಸೂಕ್ತ ದಾಖಲೆ ಇದ್ರೆ ಸರ್ಕಾರಕ್ಕೆ ಕೊಡಿ ಸರ್ಕಾರಕ್ಕೆ ದಾಖಲೆ ಒದಗಿಸಿದರೆ ಉತ್ತರ ಕೊಡುವುದಕ್ಕೆ ಸಿದ್ದವಿದ್ದೇವೆ. ಕೊವಿಡ್ ಮೆಡಿಕಲ್​ ಕಿಟ್​​​​​​ ವಿಚಾರದಲ್ಲಿ ಹಗರಣ ನಡೆದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

RELATED ARTICLES

Related Articles

TRENDING ARTICLES