ಬೆಂಗಳೂರು : ಇಂದು ಕೆಪಿಸಿಸಿ ಅಧ್ಯಕ್ಷಾರಾಗಿ ಡಿ.ಕೆ ಶಿವಕುಮಾರ್ ಅಧಿಕಾರಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆ ಮಾಡಿ, ಡಿ. ಕೆ ಶಿವಕುಮಾರ್ ಅವರಿಗೆ ಶುಭಾಷಯ ಕೋರಿದರು.
ದಿನೇಶ್ ಗುಂಡುರಾವ್ ಭಾಷಣದ ವೇಳೆ ಕರೆ ಮಾಡಿದ ರಾಹುಲ್ ಗಾಂಧಿ ‘’ನಿಮಗೆ ಕೊಟ್ಟಿರುವ ಜವಬ್ದಾರಿನ್ನ ನೀವು ನಿಷ್ಠೆಯಿಂದ ಮಾಡುತ್ತೀರ ಎಂದು ನಂಬಿದ್ದೇವೆ . ಕಷ್ಟದಲ್ಲಿರುವ ಜನರಿಗೆ ಈ ಸಂದರ್ಭದಲ್ಲಿ ನಾವುಗಳು ನೆರವಾಗೋಣ ನಿಮ್ಮಿಂದ ಉತ್ತಮ ಕೆಲಸದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.