Thursday, September 19, 2024

ರಾಜ್ಯ ಸರ್ಕಾರದಿಂದ ಹಿಂದೂಗಳನ್ನು ಹತ್ತಿಕ್ಕುವ ಕಾರ್ಯ; ರವಿಕುಮಾರ್​​​​​

ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಹೆಚ್ಚು ಹಿಂದೂಗಳ ಮೇಲೆಯೇ ಕೇಸ್ ಹಾಕಿದ್ದಾರೆ. ದಲಿತರನ್ನು ಉದ್ಧಾರ ಮಾಡುವ ಸರ್ಕಾರ ಅಂತ ಹೇಳುತ್ತಾರೆ. ಆದ್ರೆ ಅದು ಕೇವಲ ಮಾತಿಗೆ ಮಾತ್ರ ಎಂದು ವಿಧಾನ ಪರಿಷತ್​​​​​​ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್​​.ರವಿಕುಮಾರ್​​​​​​ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ಅನ್ಯಕೋಮಿನ ಯುವಕರು ಕಾರಣ. ಆದರೆ ಕೇವಲ ಹಿಂದೂಗಳ ಮೇಲೆ ಮಾತ್ರ ಕೇಸ್​​ ಹಾಕಿದ್ದಾರೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಅನ್ಯಕೋಮಿನ ಯುವಕರನ್ನು ತೃಪ್ತಿ ಪಡಿಸೋ ಸರ್ಕಾರ ಆಗಿದೆ ಎಂದು ಆರೋಪಿಸಿದರು. ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಜಾತ್ಯತೀತ ಸರ್ಕಾರ ಅಂತಾ ಹೇಳುತ್ತಾರೆ. ಆದರೆ ಈ ಸರ್ಕಾರ ದಲಿತರು ಮತ್ತು ಹಿಂದೂಗಳನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಗಣಪತಿ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಿದ್ದಾರೆ, ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮಸೀದಿಯಲ್ಲಿ ತಲ್ವಾರ್‌ಗಳು ಬಂದಿದ್ದು ಹೇಗೆ. ಅದೇ ರೀತಿ 40 ಅಂಗಡಿಗಳಲ್ಲಿ ದರೋಡೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES