ಬೆಂಗಳೂರು: ಭಾರತದ ವಿರೋಧಿಗಳು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗೆಳೆಯರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಕ್ಕೆ ಹೋಗಿ ಮೀಸಲಾತಿ ತೆಗೆಯುತ್ತೇವೆ ಎನ್ನುತ್ತಾರೆ. ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ನಡೆದುಕೊಂಡ ರೀತಿ ಅಸಹ್ಯ. ಈ ಆಶಾಢಭೂತಿತನ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಗಮನಿಸಿ: ತೂಕದಲ್ಲಿ ಮೋಸ; ಅಡಿಕೆ ವ್ಯಾಪಾರಿಗೆ ₹20 ಲಕ್ಷ ದಂಡ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಕಾಲದಿಂದಲೂ ಕಾಂಗ್ರೆಸ್ ಮೀಸಲಾತಿಯನ್ನು ವಿರೋಧ ಮಾಡಿಕೊಂಡು ಬರುತ್ತಿದೆ. ರಾಜೀವ್ ಗಾಂಧಿ ಮಂಡಲ ಕಮಿಷನ್ಗೆ ವಿರೋಧ ವ್ಯಕ್ತಪಡಿಸಿದ್ದರು. ಓಬಿಸಿ, ಎಸ್ಸಿಎಸ್ಟಿಗಳಿಗೆ ಮೀಸಲಾತಿ ನೀಡಲು ರಾಜೀವ್ ಗಾಂಧಿ ವಿರೋಧ ಮಾಡಿದ್ದರು.
ರಾಹುಲ್ ಗಾಂಧಿ ಅಮೆರಿಕದಲ್ಲಿ ಭೇಟಿ ಮಾಡಿದವರನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಇಲ್ಹನ್ ಉಮರ್ ಭಾರತದ ವಿರುದ್ಧ ಇದ್ದಾರೆ. ಅವರನ್ನು ಯಾಕೆ ರಾಹುಲ್ ಗಾಂಧಿ ಭೇಟಿ ಮಾಡಿದರು ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.