ಬೆಂಗಳೂರು: ಜಿಎಸ್ಟಿ ಅಧಿಕಾರಿಗಳು ದಾಳಿ ಹೆಸರಲ್ಲಿ 1.5 ಕೋಟಿ ಹಣ ದೋಚಿದ್ದಾರೆ ಎಂದು ದೂರು ಸಲ್ಲಿಸಿದ್ದ ವ್ಯಕ್ತಿ ಮುಕೇಶ್ ಜೈನ್ ನಾಪತ್ತೆಯಾಗಿದ್ದಾನೆ. ಇದೀಗ ಈತನ ನಾಪತ್ತೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಕೇಶ್ ಜೈನ್ ಜಿಎಸ್ಟಿ ಕಂಪನಿ ಹೆಸರಿನಲ್ಲಿ ಹವಾಲ ದಂಧೆ ನಡೆಸುತ್ತಿದ್ದನಾ ಎಂಬ ಪ್ರಶ್ನೆ ಮೂಡಿದೆ.
ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಪ್ರತಾಪ ಸಿಂಹ ಕಿಡಿ
ಹವಾಲ ದಂಧೆ ಶಂಕೆ ಹಿನ್ನೆಲೆ ಜಿಎಸ್ಟಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ನಡೆಸಿದ ಜಿಎಸ್ಟಿ ಅಧಿಕಾರಿಗಳು ಕೇಶವ್ ಥಕ್ ಮುಕೇಸದ್, ಪವನ್ ಮತ್ತು ರಾಕೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದರು.
ಆದರೆ ಜಿಎಸ್ಟಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮುಕೇಶ್ ಜೈನ್ ಜಿಎಸ್ಟಿ ಅಧಿಕಾರಿಗಳಿಗೆ 1.5 ಕೋಟಿ ಹಣ ನೀಡಿದ್ದಾನೆ ಎನ್ನಲಾಗಿದೆ. ಮೂರು ಕೋಟಿಗೆ ಮಾತುಕತೆ ನಡೆಸಿ ಬಳಿಕ ಒಂದೂವರೆ ಕೋಟಿಗೆ ಡೀಲ್ ನಡೆದಿರುವ ಸಾಧ್ಯತೆ ಇದೆ.
ಈ ಘಟನೆ ನಡೆದು ಸುಮಾರು ಎಂಟು ದಿನಗಳ ನಂತರ ಮುಕೇಶ್ ಜೈನ್ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದಾನೆ. ಸದ್ಯ ಮುಕೇಶ್ ಜೈನ್ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ದೂರು ದಾಖಲಿಸದಂತೆ ಜಿಎಸ್ಟಿ ಅಧಿಕಾರಿಗಳಿಗೆ 1.5 ಕೋಟಿ ರೂ. ಕೊಟ್ಟಿರುವುದನ್ನ ಒಪ್ಪಿಕೊಂಡ್ರೆ ಮುಕೇಶ್ ಜೈನ್ಗೆ ಸಂಕಷ್ಟ ಉಂಟಾಗಲಿರುವ ಹಿನ್ನೆಲೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.