ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮಾಧ್ಯಮದವರಿಗೆ ತನ್ನ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದಿದ್ದಾನೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಸಂದರ್ಶಕರ ಕೊಠಡಿಗೆ ತೆರಳುವ ವೇಳೆ ಮಾಧ್ಯಮದ ಕ್ಯಾಮೆರಾ ಕಂಡು ಅಸಭ್ಯವಾಗಿ ವರ್ತಿಸಿದ್ದಾನೆ.
ಬಿಜೆಪಿ ಪ್ರತಿಭಟನೆ ಪ್ರಾಣಿಹಿಂಸೆ ವಿರುದ್ಧ ಕಟುಕರ ಪ್ರತಿಭಟನೆಯಂತೆ; ಸಿಎಂ
ಬಳ್ಳಾರಿ ಜೈಲಿನಲ್ಲಿ ಕೊಳೆಯುತ್ತಿದ್ದರೂ ನಟ ದರ್ಶನ್ ದುರಹಂಕಾರ ಮಾತ್ರ ಕಡಿಮೆಯಾಗಿಲ್ಲ. ಜೈಲು ಆವರಣದ ಒಳಗೆ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದಿದ್ದಾನೆ. ವಕೀಲರು ಹಾಗೂ ಪತ್ನಿ ಭೇಟಿಗೆ ಬಂದ ವೇಳೆ ದರ್ಶನ್ ಧಿಮಾಕು ಪ್ರದರ್ಶಿಸಿದ್ದಾನೆ. ಮಾಧ್ಯಮಗಳ ಮೇಲೆ ಗುರಾಯಿಸಿ ಬೆರಳು ತೋರಿಸಿ ತೆರಳಿದ್ದಾನೆ. ಕತ್ತಲ ಕೋಣೆಯಲ್ಲಿದ್ದರೂ ಡೆವಿಲ್ ದುರಹಂಕಾರಕ್ಕೆ ಕಮ್ಮಿ ಇಲ್ಲ. ಕೊಲೆ ಮಾಡಿದ್ರೂ ಡೆವಿಲ್ ಮುಖದಲ್ಲಿ ಪಶ್ಚಾತಾಪ ಕಾಣಿಸಿಕೊಳ್ಳುತ್ತಿಲ್ಲ.