ಬೆಂಗಳೂರು: ಮುಡಾ ಹಗರಣ ಬೆಳಕಿಗೆ ಬರ್ತಿದ್ದಂತೆ ರಾಜ್ಯಪಾಲರು ಆ್ಯಕ್ಟಿವ್ ಆಗಿದ್ದಾರೆ. ಇದೀಗ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಗಣಿ ಗುತ್ತಿಗೆ ಪ್ರಕರಣ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ ಸಂಡೂರಿನ 550 ಎಕರೆ ಗಣಿ ಹಗರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕೆೆಂದು ಗವರ್ನರ್ಗೆ ಕಳೆದ ವರ್ಷ ನವೆಂಬರ್ 21ರಂದು SIT ಪತ್ರ ಬರೆದಿದ್ದಾರೆ. ಇದೀಗ ವರದಿ ನೀಡುವಂತೆ ಲೋಕಾಯುಕ್ತ SITಗೆ ಪತ್ರ ಬರೆದಿದ್ದಾರೆ. ಡಿ.ವಿ.ಪ್ರಸಾದ್ ಸ್ಟೇಟ್ಮೆಂಟ್ನಲ್ಲಿ ಹೆಚ್ಡಿಕೆ ಸಹಿಗಳ ಬಗ್ಗೆ ಗೊಂದಲವಿದೆ ಸ್ಪಷ್ಟನೆ ನೀಡಲು ಸೂಚನೆ ನೀಡಿದ್ದಾರೆ.
2015ರಲ್ಲಿ ಹೆಚ್ಡಿಕೆ ಸಹಿ ಎಂದಿದ್ದರು, 2017ರಲ್ಲಿ ಸಹಿ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಕ್ಷ್ಯಾಧಾರಗಳ ಕುರಿತು ವಿವರಣೆ ನೀಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಪವರ್ ಟಿವಿ ವಿಸ್ತ್ರೃತವಾಗಿ ವರದಿ ಮಾಡಲಾತ್ತು.