ಬೆಂಗಳೂರು: ರಾಜ್ಯದ ಪ್ರತಿಷ್ಠಿತ ನ್ಯೂಸ್ ಚಾನಲ್ಗಳಲ್ಲಿ ಒಂದಾದ ಪವರ್ ಟಿವಿ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಒಲಿದು ಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ”ಶ್ರೀಯುತ ರಾಕೇಶ್ ಶೆಟ್ಟಿ” ಅವರು ‘ಫೈರ್ ಬ್ರ್ಯಾಂಡ್ ಜರ್ನಲಿಸ್ಟ್ 2024’ ಅವಾರ್ಡ್ಗೆ ಭಾಜನರಾಗಿದ್ದಾರೆ.
ಇಂದು( ಆಗಸ್ಟ್ 17, 2024) TNIT (The New Indian Times) ಸಂಸ್ಥೆಯ ವತಿಯಿಂದ ಮಾಧ್ಯಮ ಲೋಕದ ಸಾಧಕರಿಗೆ ಪ್ರತಿ ವರ್ಷದಂತೆ ಈ ಸಲ ಕೂಡ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಅವಾರ್ಡ್ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಫೈರ್ ಬ್ರ್ಯಾಂಡ್ ಅವಾರ್ಡ್ ಪವರ್ ಟಿವಿ ಕೆಲಸ ಮಾಡುತ್ತಿರುವ 300 ಜನ ಉದ್ಯೋಗಿಗಳಿಗೆ ಅರ್ಪಿಸುತ್ತಿದ್ದೇನೆ. ಫೈರ್ ಬ್ರ್ಯಾಂಡ್ ಆಗಬೇಕು ಅಂದ್ರೆ ಯಾರಾದ್ರೂ ಫೈರ್ ಹಚ್ಚಲೇಬೇಕು ಈ ಕೆಲಸ ಮಾಡಿದವರು ನನ್ನ ಉದ್ಯೋಗಿಗಳು ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಆರು ವರ್ಷದಲ್ಲಿ ಎರಡು ಸಲ ಪವರ್ ಟಿವಿಯನ್ನು ಬಂದ್ ಮಾಡಿಸಲಾಯಿತು. ಒಂದು ಸಲ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರ ಹಗರಣ ಬಯಲು ಮಾಡಿದಾಗ ಪೊಲೀಸರಿಂದ ನಮ್ಮ ಚಾನಲ್ಅನ್ನು ಮುಚ್ಚಿಸಲಾಯಿತು. ಇನ್ನೊಂದು ಸಲ ಮಾಜಿ ಪ್ರಧಾನಿ ಕುಟುಂಬದ ಸ್ಟೋರಿಯನ್ನು ಹೊರತಂದ ನಂತರ ಕೋರ್ಟ್ನಿಂದ ಆದೇಶ ತಂದು ಮುಚ್ಚಿಸಲಾಯಿತು. ಆದರೆ ಇವತ್ತು ತುಂಬಾ ಶಕ್ತಿಯುತವಾಗಿ ನಿಂತುಕೊಂಡಿದ್ದೇವೆ. ಕೆಟ್ಟ ಮತ್ತು ಕಷ್ಟದ ಸಮಯ ನಮ್ಮನ್ನು ಇನ್ನು ಶಕ್ತಿವಂತರಾಗಿ ರೂಪಿಸುತ್ತದೆ ಎಂಬುದಕ್ಕೆ ಪವರ್ ಟಿವಿ ಉತ್ತಮ ಉದಾಹರಣೆಯಾಗಿದೆ ಎಂದರು.
ಇದನ್ನೂ ಓದಿ: ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
ನಾನು ಪರ್ತಕರ್ತನಲ್ಲ ಜರ್ನಲಿಸಂ ನನ್ನ ಪ್ಯಾಶನ್. ಇಡೀ ನನ್ನ ಜರ್ನಲಿಸಂ ಜರ್ನಿಯನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿರುತ್ತದೆ. ಈ ದೆಸೆಯಲ್ಲಿ ಪವರ್ ಟಿವಿ ಗೆದ್ದಿದೆ. ನನ್ನ ಒಳ್ಳೆಯದು ಮತ್ತು ಕೆಟ್ಟ ಸಮಯದಲ್ಲಿ ಯಾರ್ಯಾರು ನನ್ನ ಜೊತೆ ನಿಂತಿದ್ರು ಅವರೆಲ್ಲಾರಿಗೂ (ಪವರ್ ಫ್ಯಾಮಿಲಿ) ಈ ಅವಾರ್ಡ್ ಅರ್ಪಿಸುವೆ ಎಂದು ನುಡಿದರು.
ಮಾಧ್ಯಮ ಲೋಕದಲ್ಲಿ ಯಾರು ತೋರದ ಡೇರಿಂಗ್ನೆಸ್ ತೋರುವ ಮೂಲಕ, ಧರ್ಮಾಧಿಕಾರಿಗಳು, ರಾಜಕಾರಣಿಗಳು ಮತ್ತು ಅವರ ಕುಟುಂಬಗಳ ಕರಾಳ ಮುಖವನ್ನು ಜನರ ಮುಂದೆ ಬಟಾಬಯಲು ಮಾಡುವ ಮೂಲಕ ದೇಶಾದ್ಯಂತ ಪವರ್ ಟಿವಿ ಹೆಸರು ಮನೆ ಮಾತಾಗುವಂತೆ ಮಾಡಿದ ರಾಕೇಶ್ ಶೆಟ್ಟಿಯವರ ಸಾಧನೆಯನ್ನು ಪರಿಗಣಿಸಿ TNIT ಸಂಸ್ಥೆಯು ಈ ವರ್ಷದ “ಫೈರ್ ಬ್ರಾಂಡ್ ಜರ್ನಲಿಸ್ಟ್” ಅವಾರ್ಡ್ ನೀಡಿ ಗೌರವಿಸಿದೆ.