ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೈತಿಕವಾಗಿ ರಾಜೀನಾಮೆ ಕೊಡಬೇಕು ಅಂತಾ ಆರ್. ಆಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ಖಾಸಗಿ ದೂರಿನ ಮೇಲೆ ಸಿಎಂ ಪ್ರಾಸಿಕ್ಯೂಷನ್ಗೆ ಅನುಮತಿ ಕುತೂಹಲ ಮೂಡಿಸಿದೆ: ಶಾಸಕ SR ವಿಶ್ವನಾಥ್
ಬೆಂಗಳೂರಿನಲ್ಲಿ ಮಾತನಾಡಿದ ಅವರು. ನಮ್ಮ ಹೋರಾಟ ಇರುವುದು, ವ್ಯಕ್ತಿ ಅಲ್ಲ, ಆಗಿರುವ ಭ್ರಷ್ಟಾಚಾರ ಬಯಲಿಗೆ ಬರಬೇಕು. ಸತ್ಯಾಸತ್ಯತೆ ಹೊರಗಡೆ ಬರಲಿ, ನಾವು ದ್ವೇಷ ರಾಜಕಾರಣ ಮಾಡಿಲ್ಲ, ಹಾಗಿದ್ರೆ ಕಾಂಗ್ರೆಸ್ ನಾಯಕರ ಪ್ರಕರಣವೂ ಸಾಕಷ್ಟಿದೆ. ದ್ವೇಷದ ರಾಜಕಾರಣ ಮಾಡಿದ್ರೆ, ಎಲ್ರೂ ದ್ವೇಷ ರಾಜಕಾರಣ ಮಾಡಬೇಕಾಗುತ್ತದೆ.
ನೈತಿಕ ಹೊಣೆ ಹೊತ್ತು ಮೊದಲು ಸಿಎಂ ರಾಜೀನಾಮೆ ಕೊಡಬೇಕು. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು. ಇನ್ನು ಎಲ್ಲಾ ಸೈಟ್ ವಾಪಸ್ ಪಡೆಯಬೇಕು ಅಂತಾ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಡ ಹಾಕಿದ್ದಾರೆ.