ರಾಯಚೂರು: ಬಯಲು ಶೌಚಕ್ಕೆ ಹೋದ ಮಹಿಳೆಯನ್ನ ಗಮನಿಸದೇ ಆಕೆಯ ಮೇಲೆ ಜೆಸಿಬಿ ಚಾಲಕ ಮಣ್ಣು ಸುರಿದಿದ್ದು, ಉಸಿರುಗಟ್ಟಿ ಆಕೆ ಮೃತಪಟ್ಟಿದ್ದಾಳೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಲ್ಲಿ ಯಾರ ಯಾರ ಹೆಸರಲ್ಲಿ ಎಷ್ಟು ಜಮೀನಿದೆ ಗೊತ್ತಾ?
32 ವರ್ಷದ ತಾಯಮ್ಮ ಮೃತ ದುರ್ದೈವಿ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಬೆಳೆದಿತ್ತು. ಬಡಾವಣೆ ಕೆಲ ಬಡ ಮಹಿಳೆಯರು ಇಲ್ಲಿ ಬಯಲು ಶೌಚಕ್ಕೆ ಹೋಗುತ್ತಿದ್ದರು. ಆದರೇ ನಿವೇಶನ ಸ್ವಚ್ಚಗೊಳಿಸುತ್ತಿದ್ದ ಜೆಸಿಬಿ ಚಾಲಕ ಮಹಿಳೆ ಇದ್ದಿದ್ದನ್ನ ಗಮನಿಸದೇ ಮಣ್ಣು ಸುರಿದಿದ್ದಾನೆ. ದೇಹದ ಮೇಲೆ ಮಣ್ಣು ಬೀಳ್ತಿದ್ದಂತೆ, ಮಹಿಳೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾಳೆ. ಘಟನೆಯಿಂದ ಮೂರು ಮಕ್ಕಳು ಅನಾಥರಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಕಲೆ ಹಾಕಿ ನಂತರ ಜೆಸಿಬಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.