ಹಾಸನ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ದೌರ್ಜನ್ಯಕ್ಕೆ ಬೇಸತ್ತಿದ್ದ ಹಾಸನ ಜನತೆ ಬಿಗ್ ರಿಲೀಫ್ ಸಿಕ್ಕಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಹೆಚ್ಡಿಡಿ ಫ್ಯಾಮಿಲಿ ದೌರ್ಜನ್ಯದ ವಿರುದ್ಧ ಪವರ್ ಟಿವಿ ಸುದ್ದಿ ಮಾಡಿದ್ದು ಈಗ ಜನರಿಗೆ ಧೈರ್ಯ ತುಂಬಿದೆ.
ಸದ್ಯ ಹಾಸನಾದ್ಯಂತ ಮನೆಮನೆಗಳಲ್ಲಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರ ಭಾವಚಿತ್ರವನ್ನ ದೇವರ ಕೋಣಯಲ್ಲಿಟ್ಟು ಜಿಲ್ಲೆಯ ಜನರು ಪೂಜೆ ಮಾಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ಆಗುತ್ತಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬದಲ್ಲಿ ಯಾರ ಯಾರ ಹೆಸರಲ್ಲಿ ಎಷ್ಟು ಜಮೀನಿದೆ ಗೊತ್ತಾ?
ಇತ್ತೀಚಿಗಷ್ಟೇ ಪವರ್ ಟಿವಿಯಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾಮ ಕಾಂಡದ ಬಗ್ಗೆ ಪವರ್ ಟಿವಿ ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಬಳಿಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಕೂಡ ಸುದ್ದಿಯಿಂದ ಜೈಲು ಸೇರಿದ್ದರು. ತದನಂತರ ಸೂರಜ್ ರೇವಣ್ಣ ಕೂಡ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಹೊರಗಿದ್ದಾರೆ.
ಅದುವಲ್ಲದೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ದಾಹಕ್ಕಾಗಿ ಪಕ್ಷದಿಂದ ಪಕ್ಷ ಜಿಗಿಯುವುದು, ಮಾತಿನ ಮೇಲೆ ನಿಲ್ಲದಿರುವುದು, ದಾಖಲೆಗಳನ್ನು ಬಿಡುಗಡೆ ಮಾಡ್ತೀನಿ ಅಂತ ಹೇಳಿ ಸುಳ್ಳು ಹೇಳಿಕೆ ಕೊಟ್ಟು ಜನರನ್ನು ದಾರಿತಪ್ಪಿಸುವುದು ಇವೆಲ್ಲಾವನ್ನು ಪವರ್ ಟಿವಿ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿತ್ತು.