ಬೆಂಗಳೂರು: ಪತಿಯನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತಿ ಮಹೇಶ್ ಕೊಲೆಯಾದ ವ್ಯಕ್ತಿ. ಕೃತ್ಯ ಎಸಗಿದ ಆರೋಪದಡಿ ಕೊಲೆಯಾದ ಮಹೇಶ್ ಅವರ ಪತ್ನಿ ತೇಜಸ್ವಿ ಹಾಗೂ ಆಕೆಯ ಪ್ರಿಯಕರ ಗಜೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಮಹೇಶ್ ಹಾಗೂ ತೇಜಸ್ವಿನಿ ಹಾಸನ ಮೂಲದವಾಗಿದ್ದರು. ಕೆಲ ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ ಚಾಲಕನಾಗಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್ನ ಸಾಲ ವಸೂಲಾತಿ ವಿಭಾಗದಲ್ಲಿದ್ದ ಕೆಲಸ ಮಾಡುತ್ತಿದ್ದಳು. ಒಂದು ವರ್ಷದಿಂದ ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು. ಈ ನಡುವೆ ತೇಜಸ್ವಿನಿ ತನ್ನ ಆಫೀಸ್ನ ಗಜೇಂದ್ರ ಜೊತೆ ಸ್ನೇಹ ಬೆಳೆಸಿದ್ದಳು. ಈ ವಿಚಾರ ಗೊತ್ತಾಗಿ ಮಹೇಶ್ ತೇಜಸ್ವಿನಿಗೆ ಬುದ್ಧಿವಾದ ಹೇಳಿದ್ದ.
ಇದನ್ನೂ ಓದಿ:ತುಂಗಭದ್ರ ಡ್ಯಾಂ ಗೇಟ್ ಲಿಂಕ್ ಕಡಿತ: ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ
ಆಗಸ್ಟ್ 9 ರಂದು ಮಹೇಶ್ ಕೆಲಸಕ್ಕೆ ಹೋಗಿದ್ದಾಗ ಗಜೇಂದ್ರ ಮನೆಗೆ ಬಂದಿದ್ದ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ ಗಜೇಂದ್ರ ಮನೆಯಲ್ಲಿದ್ದ. ಈ ವೇಳೆ ಮಹೇಶ್ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಗಜೇಂದ್ರ ಜಗಳ ಬಿಡಿಸಲು ಬಂದಾಗ ಆತನಿಗೂ ಥಳಿಸಿದ್ದಾನೆ. ಆಗ ಗಜೇಂದ್ರ ಹಾಗೂ ತೇಜಸ್ವಿನಿ ಸೇರಿ ಮಹೇಶ್ ಕುತ್ತಿಗೆ ಹಿಡಿದು ಹತ್ಯೆ ಮಾಡಿದ್ದಾರೆ. ಬಳಿಕ ಗಜೇಂದ್ರ ಮನೆಗೆಯಿಂದ ಎಸ್ಕೇಪ್ ಆಗಿದ್ದಾನೆ. ಜೋರಾಗಿ ಚಿರಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತೇಜಸ್ವಿ ಡ್ರಾಮಾ ಆಡಿದ್ಧಾಳೆ. ವಿಚಾರಣೆ ವೇಳೆ ಪ್ರಿಯತಮ ಹಾಗೂ ಪತ್ನಿಯ ಕಳ್ಳಾಟ ಬಯಲಾಗಿದೆ. ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.