Friday, September 20, 2024

ಸೂರ್ಯ ಟೆಂಪಲ್​ನಲ್ಲಿ ಮಣ್ಣಿನ ಹರಕೆ ತೀರಿಸಿದ ನಟ ಯಶ್​ ದಂಪತಿ

ದಕ್ಷಿಣ ಕನ್ನಡ: ಪ್ಯಾನ್​ ಇಂಡಿಯಾ ಸ್ಟಾರ್​ ನಟ ಯಶ್​ ಇಂದು ಪತ್ನಿ ಮತ್ತು ಮಕ್ಕಳೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದ ನಿಯಮದಂತೆ ಪಂಚೆ, ಶರ್ಟ್​ ಧರಿಸಿ ಸುರ್ಯ ಶ್ರೀಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ಮಣ್ಣಿನ ಹರಕೆ ಅರ್ಪಿಸಿದ್ದಾರೆ. ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಯಶ್​ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

ಇದನ್ನೂ ಓದಿ: ಸ್ಪಂದನ ಅಗಲಿ ಇಂದಿಗೆ ಒಂದು ವರ್ಷ: ಪತ್ನಿ ನೆನೆದು ಭಾವುಕ ಪೋಸ್ಟ್​ ಹಂಚಿಕೊಂಡ ನಟ ವಿಜಯ್​ ರಾಘವೇಂದ್ರ

ಇದೇ ವೇಳೆ ಟಾಕ್ಸಿಕ್​ ಚಿತ್ರದ ನಿರ್ದೇಶಕ ವೆಂಕಟ್​ ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೆಜಿಎಫ್​ ಸಿನಿಮಾದ ಬಳಿಕ ಮತ್ತೊಂದು ಬಾರಿ ಹೈ ಬಜೆಟ್​ನ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟ ಯಶ್​ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್​ ಹೆಗಲ ಮೇಲಿದ್ದು, ಚಿತ್ರಕ್ಕಾಗಿ ಹೊಸ ಹೇರ್​ ಸ್ಟೈಲ್​ ನೊಂದಿಗೆ ಸದ್ಯ ಯಶ್​ ಟ್ರೆಂಡಿಂಗ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES