ರಾಮನಗರ: ಜನರ ಕಷ್ಟ ಕೇಳದೇ ಪಾದಯಾತ್ರೆ ಮಾಡುತ್ತಿದ್ದೀರಲ್ಲ ನಾಚಿಕೆ ಆಗಲ್ವಾ, ಬಿಜೆಪಿ ಪಾದಯಾತ್ರೆ ಅಸಹ್ಯ ಅನಿಸುತ್ತೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ್ರೆ ಬರಗಾಲ ಅಂತ ಬಿಜೆಪಿ- ಜೆಡಿಎಸ್ ನಾಯಕರು ಬೊಬ್ಬೆ ಹೊಡೆದರು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ದ ಬಿಜೆಪಿ-ದಳ ಇಂದಿನಿಂದ ಪಾದಯಾತ್ರೆ ಆರಂಭ
ಬಿಜೆಪಿ ಅವರು ಲಂಗು-ಲಗಾಮು ಇಲ್ಲದೇ ಮಾತನಾಡುತ್ತಾರೆ. ನಡವಳಿಕೆ, ಸಾಧನೆ ಇದ್ರೆ ಬಿಜೆಪಿ ಅವರ ಬಗ್ಗೆ ಮಾತನಾಡಬಹುದು. 130 ಸೀಟ್ ಗೆದ್ದು ಸರ್ಕಾರ ಮಾಡಿರೋ ಇತಿಹಾಸ ಬಿಜೆಪಿಗೆ ಇಲ್ಲ. ಜೆಡಿಎಸ್ನವರು ಬೇರೆಯವರ ಜತೆ ಸೇರಿ ಸರ್ಕಾರ ಮಾಡುತ್ತಾರೆ. ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಫೈಟ್ ಮಾಡಿದ್ದರು. ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಫೈಟ್ ಮಾಡಿದ್ದರು. ಆದರೇ, ಈಗ ಇಬ್ಬರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.