ಚೆನ್ನೈ: ಬಹುಭಾಷ ನಟ ವಿಶಾಲ್ ಅವರ ಸಿನಿಮಾಗಳಿಗೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ನಿರ್ಬಂಧ ಹೇರಿದೆ. ನಿರ್ಮಾಪಕರ ಸಂಘದಿಂದ ಅಕ್ರಮವಾಗಿ ಖರ್ಚು ಮಾಡಿರುವ ಹಣವನ್ನು ಪರಿಷತ್ತಿಗೆ ಹಿಂತಿರುಗಿಸಬೇಕೆಂದು ವಿಶಾಲ್ಗೆ ಹಲವು ಬಾರಿ ತಿಳಿಸಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ನಟ ವಿಶಾಲ್ ವಿರುದ್ಧ ಸಮರ ಸಾರಿದೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಕಾರ್ ಅಪಘಾತ: ಇಬ್ಬರು ನಟರಿಗೆ ಗಂಭೀರ ಗಾಯ
2017ರಲ್ಲಿ ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದ ನಟ ವಿಶಾಲ್ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆ ತಮಿಳುನಾಡು ಸರ್ಕಾರವು 2019ರಲ್ಲಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಗೆ ವಿಶೇಷ ಅಧಿಕಾರಿಯನ್ನು ನೇಮಿಸಿತ್ತು. ನಿರ್ಮಾಪಕರ ಸಂಘದಿಂದ ಅಕ್ರಮವಾಗಿ ಖರ್ಚು ಮಾಡಿರುವ ಹಣವನ್ನು ಪರಿಷತ್ತಿಗೆ ಹಿಂತಿರುಗಿಸಬೇಕೆಂದು ವಿಶಾಲ್ಗೆ ಹಲವು ಬಾರಿ ತಿಳಿಸಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೀಗಾಗಿ ಮೇಲ್ಕಂಡ ಸಮಸ್ಯೆಯನ್ನು ಸರಿಪಡಿಸಲು ನಟ ವಿಶಾಲ್ ಅವರಿಗಾಗಿ ನಿರ್ಮಿಸಿರುವ ಹೊಸ ಚಿತ್ರಗಳ ನಿರ್ಮಾಪಕರು ಮತ್ತು ತಂತ್ರಜ್ಞರು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಬೇಕು. ನಂತರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದ ಆಧಾರದ ಮೇಲೆ ತಮ್ಮ ಕೆಲಸವನ್ನು ಪ್ರಾರಂಭಿಸಲು ನಿರ್ಮಾಪಕರ ಸಂಘದ ಕಾರ್ಯಕಾರಿ ಸಮಿತಿಯ ತಿಳಿಸಿದೆೆ.