ಬೆಂಗಳೂರು: ಮೊನ್ನೆ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ, ನಮ್ಮ ಸ್ನೇಹಿತರು ಮತ್ತು ಹತ್ತಿರದವರು ಭೇಟಿಗೆ ಬರಬೇಕಾಗಿತ್ತು ಆದ್ದರಿಂದ ನಾನು ವಾಪಾಸ್ ಹೋಗಿದ್ದೆ. ಆದರೇ ಇಂದು ದರ್ಶನ್ರನ್ನ ಭೇಟಿ ಮಾಡಿದ್ದೇನೆ ಎಂದು ಹಾಸ್ಯನಟ ಸಾಧುಕೋಕಿಲ ಅವರು ಹೇಳಿದರು.
ಪರಪ್ಪನ ಅಗ್ರಹಾರದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ನಟ ದರ್ಶನ್ ಕೂಲ್ ಆಗಿ ಕಾಮ್ ಆಗಿ ಬುಕ್ಸ್ ಓದಿಕೊಂಡಿದ್ದಾರೆ. ಅವರನ್ನು ನೋಡಿ ನಮಗೂ ಸ್ವಲ್ಪ ನೆಮ್ಮದಿ ಸಿಕ್ತು. ದರ್ಶನ್ ಅವರ ಮೊದಲನೇ ಸಿನಿಮಾ ಮೆಜೆಸ್ಟಿಕ್ ನಿಂದ ಇಲ್ಲಿಯವರೆಗೆ ಹಲವು ಸಿನಿಮಾಗಳು ಜೊತೆಯಲ್ಲಿ ಮಾಡಿಕೊಂಡು ಬಂದಿದ್ದೇನೆ. ದರ್ಶನ್ ಆತ್ಮೀಯತೆ ಏನು ಅಂತ ನನಗೆ ಚನ್ನಾಗಿ ಗೊತ್ತಿದೆ. ಒಬ್ಬ ಬ್ರದರ್ ಆಗಿ ಇಂದು ಅವರ ಭೇಟಿ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ದರ್ಶನ್ಗೆ ಮನೆ ಊಟ ಕೊಡಲು ಕೋರ್ಟ್ ನಿರಾಕರಣೆ: ದಾಸನಿಗಾಗಿ ಚಕ್ಕುಲಿ ತಂದಿದ್ದ ಮಹಿಳೆಗೆ ನಿರಾಸೆ
ನಟ ದರ್ಶನ್ ಆವರ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನಿಡಿದ ಅವರು, ಸದ್ಯ ಆರೋಗ್ಯವಾಗಿದ್ದಾರೆ. ಅನಾರೋಗ್ಯಕ್ಕೀಡಾದರೇ ಒಳಗೆ ಡಾಕ್ಟರ್ ಸೇರಿ ಎಲ್ಲಾ ಸವಲತ್ತುಗಳು ಇದೆ. ಜೈಲಿನವರಿಗೂ ಅವರದ್ಧೇ ಆದ ರೂಲ್ಸ್ ಇರುತ್ತದೆ. ಅದರ ಪ್ರಕಾರ ಏನ್ ಮಾಡಬೇಕೋ ಅದನ್ನು ಮಾಡ್ತಾರೆ ಎಂದರು.
ಅಭಿಮಾನಿಗಳು ಸಮಾಧಾನವಾಗಿ ಇರಬೇಕು, ಅಭಿಮಾನಿಗಳು ಸಮಾಧಾನವಾಗಿದ್ದರೇ ಮಾತ್ರ ದರ್ಶನ್ ಅವರು ಸಮಾಧಾನವಾಗಿ ಇರ್ತಾರೆ ಎಂದರು. ಇಲ್ಲವಾದರೇ ಟೆಂಕ್ಷನ್ ಆಗ್ತಾರೆ ಎಂದರು.