ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ದರ್ಶನ್ಗೆ ನೀಡಲು ಅಭಿಮಾನಿ ಮಹಿಳೆಯೋರ್ವರು ಪರಪ್ಪನ ಅಗ್ರಹಾರದ ಜೈಲಿಗೆ ಚಕ್ಕುಲಿ ತಂದಿದ್ದಾರೆ.
ಮೈಸೂರಿನ ಸರಸ್ವತಿಪುರಂ ಮೂಲದ ಮಹಿಳೆ ಮಂಜುಳಾ ದರ್ಶನ್ ಭೇಟಿಗೆ ಆಗಮಿಸಿದ್ದು, ದರ್ಶನ್ಗಾಗಿ ಬಾತ್, ಚಕ್ಕುಲಿ ಮಾಡಿಕೊಂಡು ಬಂದಿದ್ದಾರೆ. ಜೈಲು ಒಳಗೆ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಅವರು, ದರ್ಶನ್ ತಪ್ಪು ಮಾಡಿದ್ದರೆ ತಪ್ಪೇ, ನಮಗೂ 2 ದಿನ ಬೇಜಾರಾಗಿತ್ತು. ಆದರೇ ಹಾಗೆ ಬಿಟ್ಟು ಬಿಡೋಕಾಗುತ್ತಾ, ದಯವಿಟ್ಟು ಒಳಗೆ ಬಿಡಿ. ಮಾಧ್ಯಮದವರು ಸಹಾಯ ಮಾಡಿ ನಮನ್ನು ಒಳಗೆ ಕಳಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋಹ್ಲಿಯಂತ ದಿಗ್ಗಜ ಆಟಗಾರ ಮನೀಶ್ ಪಾಂಡೆಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯಲ್ಲ!
ತನಗೆ ಮನೆ ಊಟ ನೀಡುವಂತೆ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದ ನಟ ದರ್ಶನ್ಗೆ ನಿರಾಸೆಯಾಗಿದೆ. ದರ್ಶನ್ ಕನಸು ಭಗ್ನವಾಗಿದೆ. ಅನಾರೋಗ್ಯ ಕಾರಣ ಮನೆ ಉಟಕ್ಕೆ ದರ್ಶನ್ ಮನವಿ ಸಲ್ಲಿಸಿದ್ದರು, ಸದ್ಯ ಈ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿದೆ. ವರದಿಯಲ್ಲಿ ಮನೆಊಟಕ್ಕೆ ಅವಕಾಶವಿಲ್ಲ, ಸೆಕ್ಷನ್ 728 ಪ್ರಕಾರ ಕೊಲೆ ಆರೋಪಿಗೆ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಅರ್ಜಿಯ ವಿಚಾರಣೆಯು ಮತ್ತೆ ಇದೇ ಜುಲೈ 29ರಂದು ನಡೆಯಲಿದೆ.