ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಆದ ಹಗರಣದ ಬಗ್ಗೆ ತನಿಖೆಯಾಗಲಿ, ಇವರ ಆಸ್ತಿ ಬಗ್ಗೆಯೂ ತನಿಖೆಯಾಗಲಿ ಹೋಗಲಿ ಜೈಲಿಗೆ ಎಂದು ಸ್ಬಪಕ್ಷ ಶಾಸಕ ಯತ್ನಾಳ್ ಅವರು ಗುಡುಗಿದ್ದಾರೆ.
ವಿಧಾನಸೌಧದ ಬಳಿ ಪವರ್ಟಿವಿಯೊಂದಿಗೆ ಮಾತನಾಡಿದ ಅವರು, ಯಾಕೆ ಪಾದಯಾತ್ರೆ ಮಾಡೋದಕ್ಕೆ ಹೋಗ್ತೀರಿ. ನಿಮ್ಮ ಪೂಜ್ಯ ತಂದೆ ಅವಧಿಯಲ್ಲೇನಾಗಿದೆ ನೋಡಿ ಎಂದು ಯತ್ನಾಳ್ ಕಿಡಿಕಾರಿದರು,. ಪೂಜ್ಯ ತಂದೆಯವರದ್ದೂ ತನಿಖೆ ಆಗಲಿ’ ಅಧಿಕಾರ ಇದ್ದಾಗ ಎಷ್ಟು ಮಾಡಿದ್ರು ತನಿಖೆ ಆಗಲಿ. ಎಲ್ಲಾ ಪಕ್ಷದವರದ್ದೂ ತನಿಖೆ ಆಗಲಿ. ಬಿಎಸ್ವೈ, ಬೊಮ್ಮಾಯಿ, ಹೆಚ್ಡಿಕೆ, ಶೆಟ್ಟರ್, ಸದಾನಂದಗೌಡರ ಕಾಲದಲ್ಲೇನಾಗಿದೆ ಎಲ್ಲವೂ ತನಿಖೆ ಆಗಲಿ ಎಂದು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಎಂಗೆ ಬಂಧನ ಭೀತಿ, ಡಿಕೆಶಿಗೆ ಗಂಡಾಂತರ, ರೇವಣ್ಣಗೆ ರಿಲೀಫ್: ಶ್ರೀಗಳ ಕಾಲಜ್ಞಾನ ಭವಿಷ್ಯ
ಪೂಜ್ಯ ತಂದೆ ಮತ್ತು ಮಕ್ಕಳು ಅವರ ತನಿಖೆಯಾಗಲಿ, ಮೊದಲು ಇವರು ಇವರ ಅಪ್ಪ ಎಷ್ಟು ಮಾಡಿದ್ದಾರೆ ಎಂದು ಮೊದಲು ಬಹಿರಂಗ ಪಡಿಸಲಿ, ಯಡಿಯೂರಪ್ಪನ ಸಹಿ ಫೋರ್ಜರಿ ಮಾಡಿರೋದು ಎಲ್ಲವು ತನಿಖೆಯಾಗಲಿ, ಬಣ್ಣ ಬಯಲಾಗಲಿ, ಇವರ ದಾಖಲೆಗಳು ಈಗಾಗಲೇ ಸಿದ್ದರಾಮಯ್ಯ ಬಳಿ ಇದೆ. ತನಿಖೆಯಾಗಲಿ ಹೋಗಲಿ ತಂದೆ ಮಕ್ಕಳು ಜೈಲಿಗೆ ಇದರಿಂದ ಪ್ರಾಮಾಣಿಕ ಕಾರ್ಯಕರ್ತರ ನೈತಿಕ ಬಲ ಹೆಚ್ಚಾಗುತ್ತದೆ ಎಂದು ಗುಡುಗಿದರು.
ಇನ್ನು ಸಿದ್ದರಾಮಯ್ಯನವರ ಬಗ್ಗೆ ಮುಡ ಹಗರಣ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರ ಸುಧೀರ್ಘ 40 ವರ್ಷಗಳ ರಾಜಕಾರಣದಲ್ಲಿ ಇದೆಲ್ಲಾ ಬೇಕಿತ್ತಾ? ಎಲ್ಲಾ ದಾಖಲೆಗಳೂ ಕೂಡ ಕೊಟ್ಟಿ ದಲಿತ ಕುಟುಂಬದ 3.16 ಎಕರೆನೇ ಇವರಿಗೆ ಬೇಕಿತ್ತ? ಆ ಕುಟುಂಬಕ್ಕೆ ಎರುಡುವರೆ ಮೂರು ಲಕ್ಷ ಪರಿಹಾರ ಬಿಟ್ಟರೇ ದಾಖಲೆಗಳು ಎಲ್ಲಾ ಕೊಟ್ಟಿ ಇದೆ ಎಂದು ಅವರು ಕಿಡಿಕಾರಿದರು.