ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಭೇಟಿಗೆ ಇಂದು ಕನ್ನಡ ಚಿತ್ರರಂಗದ ಹಾಸ್ಯನಟ ಸಾಧುಕೋಕಿಲ ಅವರು ಧಾವಿಸಿದ್ದರು.
ಇದನ್ನೂ ಓದಿ: ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಕೊಟ್ಟ ತರುಣ್ ಹಾಗೂ ಸೋನಲ್
ಇಂದು ಬೆಳಗ್ಗೆಯೇ ಆರೋಪಿ ದರ್ಶನ್ರನ್ನು ಭೇಟಿಯಾಗಲು ಬಂದ ಸಾಧು ಕೋಕಿಲ ಅವರ ಪ್ರವೇಶಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ. ವಾರಕ್ಕೆ ಕೇವಲ ಎರಡು ಭೇಟಿ ಹಿನ್ನೆಲೆ ಗುರುವಾರ ತಮ್ಮ ಕುಟುಂಬದವರ ಜತೆ ಭೇಟಿಗೆ ಬರುವಂತೆ ದರ್ಶನ್ ಸಾಧು ಅವರಲ್ಲಿ ಮನವಿ ಮಾಡಿದ್ದಾರೆ. ದರ್ಶನ್ ಮನವಿಯ ಮೇರೆಗೆ ಸಾಧು ಕೋಕಿಲ ಅಲ್ಲಿಂದ ವಾಪಾಸ್ ಆಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ನಟ. ನಾನು ಇಂದು ಭೇಟಿ ಮಾಡಿದರೆ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡೇನೆ ಮೀಡಿಯಾದವರು ವಿಡಿಯೋ ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು ಎಂದು ನಗು ನಗುತ್ತಲೇ ಹೇಳಿದರು.